ನರಸಿಂಹಸ್ವಾಮಿ ಹುಟ್ಟಿದ ಮನೆ ಸ್ಮಾರಕ

ನರಸಿಂಹಸ್ವಾಮಿ ಹುಟ್ಟಿದ ಮನೆ ಸ್ಮಾರಕ

ಕಿಕ್ಕೇರಿ,  ಡಿ. 8 : ಇದು ಮೈಸೂರು ಮಲ್ಲಿಗೆ ಕವಿ ನರಸಿಂಹಸ್ವಾಮಿ ಹುಟ್ಟಿದ ಮನೆ (1915) ಅವರ ಬಾಲ್ಯ ಜೀವನವನ್ನು ಇಲ್ಲಿಯೇ ಕಳೆದಿದ್ದರು. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಈ ಮನೆಗೆ 115 ವರ್ಷಗಳ ಇತಿಹಾಸವಿದೆ.
ಪ್ರೇಮಕವಿ ಎಂದೇ ಹೆಸರಾಗಿದ್ದ ನರಸಿಂಹಸ್ವಾಮಿ ಅವರ ಮನೆಯನ್ನು ದುರಸ್ತಿಗೊಳಿಸಿ ಸ್ಮಾರಕವಾಗಿ ಪರಿವರ್ತಿಸಬೇಕೆಂದು ಲೇಖಕರು ಹಾಗೂ ಕವಿಯ ಅಭಿಮಾನಿಗಳು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.
ನರಸಿಂಹ ಸ್ವಾಮಿ ಅವರ ಮೊದಲ ಕವನ ಸಂಗ್ರಹ ಮೈಸೂರು ಮಲ್ಲಿಗೆ 1942ರಲ್ಲಿ ಪ್ರಕಟಗೊಂಡು ಅಂದಿನಿಂದ 40 ಆವೃತ್ತಿಗಳನ್ನು ಕಂಡಿದೆ. ಅವರ ಕವಿತೆಗಳು ಪ್ರಸಿದ್ಧ ಮೈಸೂರು ಮಲ್ಲಿಗೆ ಹೂವಿನಂತೆ ಘಮಘಮಿಸುತ್ತವೆ. ನರಸಿಂಹಸ್ವಾಮಿ ಅವರ ಪೂರ್ವಜರ ಮನೆಯನ್ನು ಮೊದಲು ಸ್ಥಳೀಯ ವ್ಯಕ್ತಿಯೊಬ್ಬರು ಖರೀದಿಸಿ, ಅದನ್ನು ಸ್ಥಳೀಯ ಗ್ರಾಮಸ್ಥರೊಬ್ಬರಿಗೆ ಅಲ್ಪ ಮೊತ್ತಕ್ಕೆ ಗುತ್ತಿಗೆಗೆ ನೀಡಿದ್ದಾರೆ.
ನರಸಿಂಹ ಸ್ವಾಮಿ ಅವರ ಈ ಮನೆಯನ್ನು ಪಡೆದು ದುರಸ್ತಿಗೊಳಿ, ಅದನ್ನು ಸ್ಮಾರಕವಾಗಿ ಪರಿವರ್ತಿಸುವುದು ರಾಜ್ಯಸರ್ಕಾರಕ್ಕೆ ಕಷ್ಟದ ವಿಷಯವೇನಲ್ಲಾ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಮಾಜಿ ನಿರ್ದೇಶಕ ಹಾಗೂ ಖ್ಯಾತ ಗಾಯಕ ವೈ. ಕೆ. ಮುದ್ದುಕೃಷ್ಣ.
ನರಸಿಂಹಸ್ವಾಮಿ ಅವರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಿ, ಅದರಲ್ಲಿ ಅವರು ಬಳಸುತ್ತಿದ್ದ ಪೆನ್, ಪ್ರಕಟಗೊಂಡು ಪುಸ್ತಕಗಳು, ಪ್ರಶಸ್ತಿಗಳು, ಬಟ್ಟೆ ಮತ್ತಿತರ ವಸ್ತುಗಳನ್ನು ಸಂರಕ್ಷಿಸಬಹುದಾಗಿದೆ. ಅಲ್ಲದೇ, ಇದು ಮೈಸೂರು ಮಲ್ಲಿಗೆ ಕವಿಗೆ ನೀಡಿದ್ದಂತಹ ಗೌರವವಾಗುತ್ತದೆ ಎಂದು ಅವರನ್ನು ಹೇಳುತ್ತಾರೆ.
2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇಲ್ಲಿಗೆ ಭೇಟಿ ನೀಡಿದ್ದರು. ಕಳೆದ ವರ್ಷ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇಬ್ಬರು ಕೂಡಾ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸುವ ಭರವಸೆ ನೀಡಿದ್ದರು. ಆದರೆ, ಏನೂ ಆಗಲಿಲ್ಲ ಎಂದು ಸ್ಥಳೀಯ ನಿವಾಸಿ ಹಾಗೂ ವಕೀಲ ಕಾಳೇಗೌಡ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos