ನವದೆಹಲಿ, ಡಿ. 3 : ಪ್ರಧಾನಿ ಮೋದಿ ಸಂಸತ್ ಅಧಿವೇಶನದಲ್ಲಿ ಗೈರು ಹಾಜರಿ ಹಾಕುತ್ತಿರುವ ಬಿಜೆಪಿ ಸಂಸದರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳವಾರ ಬಿಜೆಪಿ ಸಂಸದೀಯ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಪ್ರಧಾನಿ ಅಸಮಾಧಾನಗೊಂಡ ವಿಚಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸದರಿಗೆ ತಿಳಿಸಿ, ಗೈರು ಹಾಜರಿ ಹಾಕಬಾರದು ಎಂದು ಸೂಚಿಸಿದರು. ಸಂಸದರು ಪದೇ ಪದೇ ಗೈರು ಹಾಜರಿ ಹಾಕಿ ಉಲ್ಲಂಘಿಸುತ್ತಿದ್ದೀರಿ ಎಂದು ಹೇಳಿದರು. ಗೃಹ ಸಚಿವ ಅಮಿತ್ ಶಾ ಮುಂದೆ ನಾಗರಿಕ(ತಿದ್ದುಪಡಿ) ಮಸೂದೆ ಮಂಡಿಸಲಿದ್ದಾರೆ. ಜಮ್ಮುಕಾಶ್ಮೀರದ 370ನೇ ವಿಧಿ ರದ್ದುಗೊಳಿಸುವ ನಿರ್ಧಾರದಷ್ಟೇ ಇದು ಬಹಳ ಪ್ರಮುಖ ವಿಚಾರ. ಮುಂದೆ ಕಲಾಪದಲ್ಲಿ ಮಹತ್ವದ ಮಸೂದೆಗಳು ಮಂಡನೆಯಾಗಲಿದೆ.