ಸ್ವಚ್ಚತಾ ಅಭಿಯಾನಕ್ಕೆ ಮೇಯರ್ ಚಾಲನೆ

  • In State
  • December 15, 2020
  • 171 Views
ಸ್ವಚ್ಚತಾ ಅಭಿಯಾನಕ್ಕೆ ಮೇಯರ್ ಚಾಲನೆ

ತುಮಕೂರು: ಭಾರತ ಸರ್ಕಾರದ ಸ್ವಚ್ಚ ಸರ್ವೇಕ್ಷಣ ಅಭಿಯಾನ-೨೦೨೦ರಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್‌ನಂತಹ ಸ್ವಯಂ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಯಾನ ವನ್ನು ಯಶಸ್ವಿಗೊಳಿಸುವಂತೆ ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರೀಧಾ ಬೇಗಂ ಯುವಜನರಿಗೆ ಕರೆ ನೀಡಿದ್ದಾರೆ.

ನಗರದ ಎಸ್.ಎಸ್.ಸರ್ಕಲ್‌ನಲ್ಲಿರುವ ೪ನೇ ಎನ್.ಸಿ.ಸಿ. ಬೆಟಾಲಿಯನ್ ಕಚೇರಿ ಆವರಣದಲ್ಲಿ ನಗರಪಾಲಿಕೆ, ಎನ್‌ಸಿಸಿ ತಂಡಗಳು ಆಯೋಜಿಸಿದ್ದ ಸ್ವಚ್ಚ ಸರ್ವೆಕ್ಷಣ ಅಭಿಯಾನ-೨೦೨೦ಯ ೨ನೇ ಹಂತದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಸೈನಿಕರಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಎನ್‌ಸಿಸಿಯಂತಹ ಶಿಸ್ತುಬದ್ದ ಸಂಸ್ಥೆಗಳು ಕೈಜೋಡಿಸಿದರೆ, ಸರ್ಕಾರ ಅಭಿಯಾನಗಳು ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತವೆ ಎಂಬ ನಂಬಿಕೆ ನಮ್ಮದು ಎಂದರು.

ಸುಮಾರು ೧೦೦೦ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಅಭಿಯಾನದಲ್ಲಿ ಕಳೆದ ಒಂದು ವಾರದಿಂದ ನಗರದಲ್ಲಿ ಸ್ವಚ್ಚತಾ ಕಾರ್ಯದ ಜೊತೆಗೆ, ಗೋಡೆ ಚಿತ್ರ, ಪ್ರಬಂಧ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಕೈಜೊಡಿಸಿದ್ದಾರೆ. ಮುಂದೆಯೂ ನಿಮ್ಮಿಂದ ಹೆಚ್ಚಿನ ಸಹಕಾರವನ್ನು ಬಯಸುತ್ತೇವೆ ಎಂದರು.
ಎರಡನೇ ಸ್ಥಾನದಲ್ಲಿರುವ ತುಮಕೂರು ನಗರ ೨೦೨೧ನೇ ಸಾಲಿನಲ್ಲಿ ಮೊದಲ ಸ್ಥಾನ ಪಡೆಯಲು ತಾವೆಲ್ಲರೂ ಪಾಲಿಕೆಯೊಂದಿಗೆ ಹೆಜ್ಜೆ ಹಾಕುವಂತೆ ಮೇಯರ್ ಫರೀಧಾ ಬೇಗಂ ಮನವಿ ಮಾಡಿದರು.
ಕಳೆದ ಏಳು ದಿನಗಳಿಂದ ತುಮಕೂರು ನಗರದಲ್ಲಿ ರಸ್ತೆ ಸ್ವಚ್ಚತೆ, ಪಾರ್ಕ್ಗಳ ನಿರ್ವಹಣೆ ಸೇರಿದಂತೆ ಹಲವಾರು ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಕೋವಿಡ್-೧೯ ಸಂದರ್ಭದಲ್ಲಿಯೂ ನಮ್ಮ ಕೆಡೆಟ್‌ಗಳು ೧೫ಕ್ಕೂ ಹೆಚ್ಚು ಜಾಗೃತಿ ರ‍್ಯಾಲಿಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ..ಭಾರತ ಸರಕಾರದ ಸ್ವಚ್ಚ ಸರ್ವೆಕ್ಷಣ ಅಭಿಯಾನ-೨೦೨೦ರಲ್ಲಿ ನಾವುಗಳು ಪಾಲ್ಗೊಂಡು, ತುಮಕೂರು ನಗರವನ್ನು ಮೊದಲ ಸ್ಥಾನಕ್ಕೆ ತರಲು ಪ್ರಯತ್ನಿಸುವುದಾಗಿ ಲೆಪ್ಟಿನೆಂಟ್ ರಾಮಲಿಂಗಾರೆಡ್ಡಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಪೋರೇಟರ್ ಹಾಗೂ ಮಾಜಿ ಉಪಮೇಯರ್ ರೂಪಶ್ರೀ,ಎನ್.ಸಿ.ಸಿ.ಅಧಿಕಾರಿಗಳಾದ ಪ್ರಭುದೇವ್, ನಾಗರಾಜು, ಅನಿಲ್,ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos