ಮತ್ಸ್ಯ ದರ್ಶಿನಿ ಉದ್ಘಾಟಿಸಿದ ಶಾಸಕ

ಮತ್ಸ್ಯ ದರ್ಶಿನಿ ಉದ್ಘಾಟಿಸಿದ ಶಾಸಕ

ಮಾಲೂರು: ಪಟ್ಟಣದಲ್ಲಿ ನೂತನವಾಗಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮತ್ಸ್ಯ ದರ್ಶಿನಿ ಹೋಟೆಲ್ ಮಳಿಗೆಯನ್ನು ಶಾಸಕ ಕೆ.ವೈ ನಂಜೇಗೌಡ ಉದ್ಘಾಟಿಸಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ರಾಜ್ಯದಲ್ಲಿ ಅನೇಕ ಕಡೆ ಮತ್ಸ್ಯ ದರ್ಶಿನಿ ಹೋಟೆಲ್ ಗೆ ಅನುಮತಿ ನೀಡುತ್ತಿದ್ದು ಅದರಂತೆ ಮಾಲೂರಿನಲ್ಲಿ ಸಹ ಅನುಮತಿ ನೀಡಿ ಒಳ್ಳೆಯ ಅವಕಾಶ ಕಲ್ಪಿಸಿದ್ದು, ಬೇರೆಡೆ ಹೋಗಿ ಮೀನು ಸವಿಯುತ್ತಿದ್ದ ಮೀನು ಪ್ರಿಯರಿಗೆ ಮತ್ಸ್ಯ ದರ್ಶಿನಿ ಹೋಟೆಲ್ ಮಳಿಗೆ ಪ್ರಾರಂಭವಾಗುತ್ತಿರುವುದು ಅನುಕೂಲಕರವಾಗಿದೆ.
ಏಜೆಸ್ಸಿ ಪಡೆದುಕೊಂಡವರು ಗ್ರಾಹಕರಿಗೆ ಉತ್ತಮ ರೀತಿಯ ಗುಣಮಟ್ಟದ ಮೀನಿನ ಆಹಾರವನ್ನು ನೀಡುವಂತೆ ಹಾಗೂ ಸ್ವಚ್ಚತೆ ಕಾಪಾಡಬೇಕ, ಕರಾವಳಿ ಸಮುದ್ರದ ಮೀನಿನಲ್ಲಿ ಅನೇಕ ಪೌಷ್ಟಿಕಾಂಶಗಳು ಹಾಗೂ ಒಳ್ಳೆಯ ರುಚಿ ಇದ್ದು, ಆರೋಗ್ಯದ ಹಿತ ದೃಷ್ಟಿಯಿಂದ ಮೀನಿನ ಆಹಾರವನ್ನು ಸೇವಿಸುವಂತೆ ತಿಳಿಸಿದರು .

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೇಹಳ್ಳಿ ನಾರಾಯಣಸ್ವಾಮಿ , ಮಾಜಿ ಕೆಡಿಪಿ ಸದಸ್ಯ ವಿಜಯನರಸಿಂಹ , ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಫ್ರೆಂಡ್ಸ್ ಸಂತೋಷ್, ನಾಗಾಪುರ ನವೀನ್, ಸಿ.ಪಿ.ಹರೀಶ್, ಕಿರಣ್ ಪಂಡು, ಮತ್ಸ್ಯ ದರ್ಶಿನಿ ಹೋಟೆಲ್ ಮಾಲೀಕ ವೆಂಕಟೇಶ್ ಪ್ರಸಾದ್ , ಬಾಲು, ಲಗುಮೇಶ್ , ಎಸ್.ಟಿ.ಎಸ್ ರೆಡ್ಡಿ , ಶಬೀರ್ ಉಲ್ಲಾ , ಮುದಾಸಿರ್ , ಶಾಸಕ ಆಪ್ತ ಕಾರ್ಯದರ್ಶಿ ಹರೀಶ್ ಗೌಡ ಇನ್ನಿತರರು ಹಾಜರಿದ್ದರು .

ಫ್ರೆಶ್ ನ್ಯೂಸ್

Latest Posts

Featured Videos