ಮುಂಬೈ, ಅ. 3 : ಮಂಗಳಮುಖಿಯಾಗಿ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ ಅಕ್ಷಯ್ ಕುಮಾರ್. ಲಕ್ಷ್ಮಿ ಬಾಂಬ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ನವರಾತ್ರಿ ಪ್ರಯುಕ್ತ ದುರ್ಗಾ ಮಾತೆಯ ಮುಂದೆ ಅಕ್ಷಯ್ ಕುಮಾರ್ ಮಂಗಳಮುಖಿಯಾಗಿ ನಿಂತಿರುವ ಭಂಗಿ ಅಭಿಮಾನಿಗಳನ್ನು ಚಕಿತಗೊಳಿಸಿದೆ.
ತಮಿಳಿನಲ್ಲಷ್ಟೇ ಅಲ್ಲದೆ ಕನ್ನಡ, ತೆಲುಗಿನಲ್ಲೂ ಜಯಭೇರಿ ಭಾರಿಸಿದ ಸಿನಿಮಾ ‘ಕಾಂಚನ’ (ಕನ್ನಡದಲ್ಲಿ ಕಲ್ಪನ). ಜನಪ್ರಿಯ ನಟ, ಕೊರಿಯೋಗ್ರಾಫರ್, ನಿರ್ದೇಶಕ ರಾಘವ ಲಾರೆನ್ಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.