ಮಹಿ ವಿರುದ್ಧ ಗವಸ್ಕರ್ ಗರಂ

ಮಹಿ ವಿರುದ್ಧ ಗವಸ್ಕರ್ ಗರಂ

ನವದೆಹಲಿ, ಜ.13 : ಮಾಜಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.
ಏಕದಿನ ವಿಶ್ವಕಪ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ರಂಗದಿಂದ ದೂರವುಳಿದಿರುವ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಸುದೀರ್ಘ ಅವಧಿಯ ವಿಶ್ರಾಂತಿಯಲ್ಲಿದ್ದಾರೆ. ಧೋನಿ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುವರೇ ಅಥವಾ ನಿವೃತ್ತಿ ಸಲ್ಲಿಸುವರೇ ಎಂಬುದು ತಿಳಿದು ಬಂದಿಲ್ಲ.

ಬಿಸಿಸಿಐ ಹಾಗೂ ಆಯ್ಕೆ ಸಮಿತಿ ಧೋನಿ ಭವಿಷ್ಯದ ಬಗ್ಗೆ ಸ್ಪಷ್ಟತೆಯಿದೆ ಎಂದಷ್ಟೇ ಹೇಳುತ್ತಿದೆ. ಸ್ವತ: ಧೋನಿ ಕೂಡಾ ಸ್ಪಷ್ಟನೆ ನೀಡಿಲ್ಲ. ಇವೆಲ್ಲದರಿಂದ ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಭಾರತದ ಯೋಜನೆಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos