ತುಮಕೂರು, ಡಿ. 3 : ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸೃಷ್ಟಿಸಿದ ಬ್ರಹ್ಮನಿಗೂ ಸಾಧ್ಯವಿಲ್ವಂತೆ. ಇನ್ನೂ ನರಮನುಷ್ಯನಿಗೆ ಸಾಧ್ಯವೇ..? ತನ್ನ ಗಂಡನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ತುಮಕೂರ ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಹೊರಭಾಗದ ದಿಬ್ಬೂರು ಬಳಿಯ ಹೆಂಚಿನಪಾಳ್ಯದ ನಿವಾಸಿ ಹನುಮೇಗೌಡ (45) ಎಂಬಾತನನ್ನು ಪತ್ನಿ ದಿವ್ಯ ಹಾಗೂ ಪ್ರಿಯಕರ ಸತೀಶ್ ಸೇರಿಕೊಂಡು ಹತ್ಯೆ ಮಾಡಿದ್ದರು.
ಆರೋಪಿಗಳ ಬಂಧನ : ಪೊಲೀಸರು ಇಬ್ಬರನ್ನು ಕೆಲವೇ ಗಂಟೆಗಳಲ್ಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಿವ್ಯ ಮತ್ತು ಆಟೋ ಚಾಲಕ ಸತೀಶ್ ಅಲಿಯಾಸ್ ಜಾಕಿ ಬಂಧಿತ ಆರೋಪಿಗಳು. ಎಸ್ಪಿ ಕೋನವಂಶಿಕೃಷ್ಣ ಅವರು ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ತಿಪ್ಪೆಸ್ವಾಮಿ, ಇನ್ಸ್ಪೆಕ್ಟರ್ ನವೀನ್ ವಿಶೇಷ ತಂಡ ರಚಿಸಿದ್ದರು. ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.