ಡಿಕೆಶಿ ಸುಮ್ಮನಿರಲ್ವಂತೆ

ಡಿಕೆಶಿ ಸುಮ್ಮನಿರಲ್ವಂತೆ

ಬೆಂಗಳೂರು,ಜ. 13 : ನಗರದ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ಮುಗಿದ ಬಳಿಕ ಪಕ್ಷದ ಕಾರ್ಯ ಚಟುವಟಿಕೆ ಸ್ಥಗಿತ ಆಗಿತ್ತು. ನಾನು ಆಯುರ್ವೇದ ಚಿಕಿತ್ಸೆಗೆ ತೆರಳಿದ್ದೆ. ಇನ್ನೂ ಚಿಕಿತ್ಸೆ ಅಗತ್ಯವಿದ್ದರೂ ನನಗೆ ಸಮಾಧಾನ ಇರಲಿಲ್ಲ. ಹೀಗಾಗಿ ನಾನು ತಕ್ಷಣವೇ ಬಂದಿದ್ದೇನೆ ಎಂದರು.
23ರಂದು ಅರಮನೆ ಮೈದಾನದಲ್ಲಿ ಪಕ್ಷದ ಸಮಾವೇಶ ನಡೆಯಲಿದೆ. ಹಾಲಿ, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು, ಸಂಸದರು ಮಾಜಿ ಸಂಸದರು ಸೇರಿ ಎಲ್ಲ ಚುನಾಯಿತ ಸದಸ್ಯರ ಸಮಾವೇಶ ಮಾಡಲಿದ್ದೇವೆ. ತಾಲೂಕು, ಜಿಲ್ಲಾಮಟ್ಟದ ನಾಯಕರ ಸಮಾವೇಶ ನಡೆಯಲಿದೆ. ಇದು ಈ ವರ್ಷದ ಮೊದಲ ಕಾರ್ಯಕ್ರಮವಾಗಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೇರಲು ನಿರ್ಣಯಿಸಲಾಗಿದೆ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos