ಚಿರತೆ ಸಂಹಾರಕ್ಕೆ ಪಟ್ಟು

ಚಿರತೆ ಸಂಹಾರಕ್ಕೆ ಪಟ್ಟು

ತುಮಕೂರು, ಜ. 11 : ಹೆಬ್ಬೂರು ಸುತ್ತಮುತ್ತಲ ಭಾಗದಲ್ಲಿ ನರಭಕ್ಷಕ ಚಿರತೆ ಸ್ಥಳೀಯರ ನೆಮ್ಮದಿ ಕೆಡಿಸಿದೆ. ಗುಬ್ಬಿ ತಾಲೂಕು ಮಣಕುಪ್ಪೆಯಲ್ಲಿ ಗುರುವಾರ ಸಂಜೆ ಬಾಲಕನ್ನು ಕೊಂದ ನಂತರ ಜನಾಕ್ರೋಶ ಸ್ಫೋಟಗೊಂಡಿದೆ.
ಗುರುವಾರ ರಾತ್ರಿ ಹೆಬ್ಬೂರು ವೃತ್ತದಲ್ಲಿ ಸಾವಿರಾರು ಜನ ಸಮಾವೇಶಗೊಂಡು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು ವಿವಾದವಾಗಿದೆ.

ಶುಕ್ರವಾರ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ನಾಗರಿಕರು ಕೂಡಲೇ ಚಿರತೆ ಸೆರೆಹಿಡಿಯಬೇಕು ಎಂದು ಡಿಎಫ್ಒ ಗಿರೀಶ್ಗೆ ಆಗ್ರಹಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos