ತುಮಕೂರು, ಜ. 11 : ಹೆಬ್ಬೂರು ಸುತ್ತಮುತ್ತಲ ಭಾಗದಲ್ಲಿ ನರಭಕ್ಷಕ ಚಿರತೆ ಸ್ಥಳೀಯರ ನೆಮ್ಮದಿ ಕೆಡಿಸಿದೆ. ಗುಬ್ಬಿ ತಾಲೂಕು ಮಣಕುಪ್ಪೆಯಲ್ಲಿ ಗುರುವಾರ ಸಂಜೆ ಬಾಲಕನ್ನು ಕೊಂದ ನಂತರ ಜನಾಕ್ರೋಶ ಸ್ಫೋಟಗೊಂಡಿದೆ.
ಗುರುವಾರ ರಾತ್ರಿ ಹೆಬ್ಬೂರು ವೃತ್ತದಲ್ಲಿ ಸಾವಿರಾರು ಜನ ಸಮಾವೇಶಗೊಂಡು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು ವಿವಾದವಾಗಿದೆ.
ಶುಕ್ರವಾರ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ನಾಗರಿಕರು ಕೂಡಲೇ ಚಿರತೆ ಸೆರೆಹಿಡಿಯಬೇಕು ಎಂದು ಡಿಎಫ್ಒ ಗಿರೀಶ್ಗೆ ಆಗ್ರಹಿಸಿದರು.