ಬೆಂಗಳೂರು, ಡಿ. 3: 15 ಕ್ಷೇತ್ರಗಳ ಉಪಚುನಾವಣೆಯ ರಂಗೇರುತ್ತಿದ್ದು, ಕೊನೆಯ ಹಂತದ ಪ್ರಚಾರದಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ. ಗುರುವಾರ ಮತದಾನ ನಡೆಯಲಿರುವ ಕಾರಣ ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಇಂದು ಸಂಜೆಯ ವೇಳೆಗೆ ಪ್ರಚಾರಕ್ಕೆ ತೆರೆ ಬೀಳಲಿದೆ. ಪಕ್ಷದ ಅಭ್ಯರ್ಥಿಗಳು ಅಂತಿಮ ಕಸರತ್ತಿನಲ್ಲಿ ತೊಡಗಿದ್ದಾರೆ. ಸಮಾವೇಶಗಳು, ಅಬ್ಬರದ ಪ್ರಚಾರದ ಮೂಲಕ ಮತದಾರರ ಮನಗೆಲ್ಲುವ ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ.