ಲಾರಿ-ಜೀಪ್ ಡಿಕ್ಕಿ : ವ್ಯಕ್ತಿಯ ಸಾವು

ಲಾರಿ-ಜೀಪ್ ಡಿಕ್ಕಿ : ವ್ಯಕ್ತಿಯ ಸಾವು

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಲಾರಿಯೊಂದು ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿದ್ದ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ತಮಿಳುನಾಡಿನ ಗೂಡ್ಲೂರಿನ ಸುಶೀಲ್ ಮೃತ ವ್ಯಕ್ತಿ . ಈತ ಜೀಪಿನಲ್ಲಿ ಬೆಂಗಳೂರಿನಿಂದ ಗೂಡೂರಿಗೆ ತೆರಳುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ .
ಪಣಾಮ ಜೀಪು ನಜ್ಜುಗುಜ್ಜಾಗಿದ್ದು ಜೀಪಿನಲ್ಲಿದ್ದ ಸುಶೀಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ . ಜೀಪಿನ ಚಾಲಕನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ .

 

ಫ್ರೆಶ್ ನ್ಯೂಸ್

Latest Posts

Featured Videos