ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರ ದುರ್ಮರಣ

  • In Crime
  • November 15, 2020
  • 216 Views
ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರ ದುರ್ಮರಣ

ಹುಳಿಯಾರು: ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹುಳಿಯಾರು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ದುರ್ಧೈವಿಗಳನ್ನು ಶ್ರೀಧರ್ (೧೨), ಧರಣೇಶ್ (೮) ಎಂದು ಗುರುತಿಸಲಾಗಿದೆ. ಇವರು ಹೊಸಹಳ್ಳಿ ಸಮೀಪದ ಕೆಂಚನಾಯ್ಕ ಎಂಬುವವರಿಗೆ ಸೇರಿದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾರೆ. ಕೃಷಿಹೊಂಡದ ಮಧ್ಯ ಹೋದ ಇವರಿಬ್ಬರೂ ಈಜಲಾಗದೆ ಮುಳುಗಿದ್ದಾರೆ.
ಇವರಿಬ್ಬರ ಜೊತೆ ತೆರಳಿದ್ದ ಮತ್ತೋರ್ವ ಬಾಲಕಿ ಕೀರ್ತಿ ಗಾಭರಿಯಿಂದ ಓಡಿ ಬಂದು ಊರಿನವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಈಜು ಬರುವ ಗ್ರಾಮದ ಏಳೆಂಟು ಮಂದಿ ಕೃಷಿಹೊಂಡಕ್ಕೆ ಇಳಿದು ಬಾಲಕರಿಬ್ಬರ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

ಫ್ರೆಶ್ ನ್ಯೂಸ್

Latest Posts

Featured Videos