ಕಾಶ್ಮೀರವು ಪಾಕಿಸ್ತಾನದ ‘ಕುತ್ತಿಗೆಯ ನರ’ : ಖಾನ್

ಕಾಶ್ಮೀರವು ಪಾಕಿಸ್ತಾನದ ‘ಕುತ್ತಿಗೆಯ ನರ’ :  ಖಾನ್

ಇಸ್ಲಾಮಾಬಾದ್, ಸೆ. 7: ಕಾಶ್ಮೀರ ವಿಚಾರದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ ತಮ್ಮ ಮೊಂಡುತನ ಮುಂದುವರೆಸಿದ್ದಾರೆ. ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಪಾಕಿಸ್ತಾನ ಪ್ರಧಾನಿ ‘’ ಕಾಶ್ಮೀರವು ಪಾಕಿಸ್ತಾನದ ‘ಕುತ್ತಿಗೆಯ ನರ’ ಇದ್ದಂತೆ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಮಾಡಿದ್ದು ದೇಶದ ಭದ್ರತೆ ಮತ್ತು ಸಮಗ್ರತೆಗೆ ಸವಾಲಾಗಿದೆ ಎಂದು ಹೇಳಿದ್ದಾರೆ.
1965ರ ಭಾರತ- ಪಾಕ್ ಯುದ್ಧದ ವರ್ಷಾಚರಣೆಯ ಅಂಗವಾಗಿ ರಕ್ಷಣೆ ಮತ್ತು ಹುತಾತ್ಮ ದಿನದ ಸಂದೇಶ ನೀಡಿದ ಇಮ್ರಾನ್ ಖಾನ್, ಕಾಶ್ಮೀರದ ವಿಷಯವಾಗಿ ತಮ್ಮ ಸರ್ಕಾರ ಜಾಗತಿಕ ವೇದಿಕೆಗಳಲ್ಲಿ ರಾಜತಾಂತ್ರಿಕ ಅಭಿಯಾನ ಆರಂಭಿಸಿದೆ. ಒಂದು ವೇಳೆ ಭಾರತದ ಅಣ್ವಸ್ತ್ರ ಶಸ್ತ್ರಾಗಾರದ ಬಗ್ಗೆ ಗಮನ ನೀಡದೇ ಇದ್ದರೆ, ಮುಂದಾಗುವ ದುರಂತಕ್ಕೆ ಅಂತಾರಾಷ್ಟ್ರೀಯ ಸಮುದಾಯವೇ ಹೊಣೆಯಾಗಲಿದೆ ಎಂದು ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos