ಗುರುಪುರದಲ್ಲಿ ಕಾಡಾನೆ ದಾಳಿ

ಗುರುಪುರದಲ್ಲಿ ಕಾಡಾನೆ ದಾಳಿ

ಮೈಸೂರು, ನ 28 : ಹುಣಸೂರು ತಾಲ್ಲೂಕಿನಲ್ಲಿ ಗುರುಪುರ ಗ್ರಾಮದ ಸಮೀಪ ಕಾಡಾನೆಯೊಂದು ಗುರುವಾರ ಬೆಳಿಗ್ಗೆ ರೈತ ರಮೇಶ್ ಅವರ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ತಮ್ಮ ಬಾಳೆತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂಟಿ ಸಲಗ ದಾಳಿ ನಡೆಸಿದೆ. ಗಾಯಗೊಂಡ ರಮೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.ಕಾಡಾನೆ ದಾಳಿಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹುಣಸೂರು- ಗುರುಪುರವನ್ನು ಸಂಪರ್ಕಿಸುವ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಕಾಡಾನೆ ದಾಳಿಯಿಂದ ಗಾಯಗೊಂಡಿರುವ ರೈತ ರಮೇಶ್

ಫ್ರೆಶ್ ನ್ಯೂಸ್

Latest Posts

Featured Videos