ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ: ಅಮೂಲ್ಯ ತಂದೆ

ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ: ಅಮೂಲ್ಯ ತಂದೆ

ಚಿಕ್ಕಮಗಳೂರು, ಫೆ. 21: ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಪಾಕಿಸ್ತಾನ ಪರ ಘೋಷಣೆ ಮಾಡುವವರು ಹೆಚ್ಚಾಗುತ್ತಿದ್ದಾರೆ ದುಶ್ಮನ್ ಕಹಾ ಹೈ ಎಂದರೆ ಬಗಲ್ ಮೇ ಹೈ ಅಂದಹಾಗೆ ಆಗಿದೆ. ನಮ್ಮ ಸುತ್ತಮುತ್ತಲಿರುವ ರೆ ನಮ್ಮ ದೇಶದ ಬಗ್ಗೆ ಕಾಳಜಿ ವಹಿಸದಿದ್ದರೆ ಹೇಗೆ.

ಮಗಳ ಕೃತ್ಯ ಅಕ್ಷಮ್ಯ ಅಪರಾಧ. ಅವಳ ತಪ್ಪಿಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ ಎಂದು ನರೋನಾ ಹೇಳಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದ ಶಿವಪುರದಲ್ಲಿ ಮಾತನಾಡಿರುವ ಅವರು, “ಅಮೂಲ್ಯ ನನ್ನ ಮಾತನ್ನು ಕೇಳುತ್ತಿರಲಿಲ್ಲ. ನನಗೆ ಆರೋಗ್ಯ ಸರಿಯಿಲ್ಲ ಮನೆಗೆ ಬಾ ಎಂದು ಹೇಳಿದ್ದರೂ ಬಂದಿರಲಿಲ್ಲ. ಅವಳು ಯಾಕೆ ಈ ರೀತಿ ಹೇಳಿದ್ದಾಳೆ ಎಂದು ಗೊತ್ತಿಲ್ಲ. ನಾನು ಅಜ್ಞಾನಿ ಅಲ್ಲ, ಅವಳಿಗೆ ತಿಳುವಳಿಕೆ ಹೇಳಿದ್ದೆ.  ಪ್ರೊ. ಸಿದ್ದಲಿಂಗಯ್ಯರಿಂದಲೂ ತಿಳುವಳಿಕೆ ಹೇಳಿಸಿದ್ದೆ. ಆದರೂ ಅವಳು ಯಾರ ಮಾತನ್ನೂ ಕೇಳಿಲ್ಲ,” ಅಂತ ಕಿಡಿಕಾರಿದ್ದಾರೆ.

“ಅವಳಿಗೆ 18 ವರ್ಷ ತುಂಬಿದೆ ಅಷ್ಟೇ, ಆದರೆ ಅಪ್ರಬುದ್ಧತೆಯಿಂದ ಮಾತನಾಡಿದ್ದಾಳೆ. ಅವಳ ಪರ ನಾನು ಕಾನೂನು ಹೋರಾಟ ಮಾಡಲ್ಲ. ಕಾನೂನಿನಲ್ಲಿ ಏನು ಆಗಬೇಕು ಆಗಲಿ. ಈಗಲಾದರೂ ಅವಳು ಜೈಲಿನಲ್ಲಿ ಕುಳಿತು ಕಾನೂನಿನ ಬಗ್ಗೆ ತಿಳಿದುಕೊಳ್ಳಲಿ.  ಐದಾರು ದಿನ ಆಯ್ತು, ಅವಳಿಗೆ ನಾನು ಕರೆ ಮಾಡಿಲ್ಲ. ಅಮೂಲ್ಯಾಗೆ ಏನು ಹೇಳಿದರೂ ಅವಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ನಾನು ಅವಳನ್ನು ಕ್ಷಮಿಸುವುದೂ ಇಲ್ಲ,” ಎಂದು ಹೇಳಿದ್ದಾರೆ.

“ಭಾರತೀಯರಿಗೆ, ಹಿರಿಯರಿಗೆ, ಯಾರಿಗೆಲ್ಲ ನೊವುಂಟು ಮಾಡಿದೆ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಯಾರ ಜೊತೆ ಸೇರಿ ಹೀಗೆ ಮಾತಾನಾಡುತ್ತಿದ್ದಾಳೋ ನನಗೆ ಗೊತ್ತಿಲ್ಲ. ತುಂಬಾ ತಿಳಿದುಕೊಂಡು ಜ್ಞಾನಿಯಾಗಿದ್ದಳು. ಯಾಕೆ ಹೀಗೆ

 

ಫ್ರೆಶ್ ನ್ಯೂಸ್

Latest Posts

Featured Videos