ಹುಬ್ಬಳ್ಳಿಯಲ್ಲಿ ಶಂಕಿತ ವಶಕ್ಕೆ

ಹುಬ್ಬಳ್ಳಿಯಲ್ಲಿ ಶಂಕಿತ ವಶಕ್ಕೆ

ಬೆಂಗಳೂರು, ಅ.22 : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಪಟ್ಟಂತೆ ಶಂಕಿತನನ್ನು ವಿಚಾರಣೆ ಗೊಳಪಡಿಸಲಾಗಿದ್ದು, ಸ್ಫೋಟಕ ವಸ್ತುಗಳ ಕಾಯ್ದೆ ಆಧರಿಸಿ ಪ್ರಕರಣ ದಾಖಲಿಸಿದ್ದಾರೆ. ವಿಜಯವಾಡದಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಕೆಂಪು ಬಣ್ಣದ ಕಾಗದದಿಂದ ಸುತ್ತಿದ್ದ ಬಕೆಟ್ವೊಂದು ಪತ್ತೆಯಾಗಿತ್ತು. ಶಿವಸೇನೆ ಶಾಸಕರೊಬ್ಬರ ಹೆಸರು ನಮೂದಿಸಲಾಗಿತ್ತು. ಅನುಮಾನಾಸ್ಪದ ಬಕೆಟ್ನ್ನು ರೈಲ್ವೆ ಪೊಲೀಸರು ಸ್ಟೇಷನ್ ಮಾಸ್ಟರ್ ಕಚೇರಿಗೆ ತಂದಿದ್ದರು. ಚಹಾ ವ್ಯಾಪಾರಿ ಹುಸೇನ್ ಸಾಬ್ (22) ಆತನಿಂದ ಬಕೆಟ್ ತೆಗೆಸಿ ಪರಿಶೀಲಿಸಿದರು. ಎರಡು ನಿಂಬೆಹಣ್ಣಿನ ಗಾತ್ರದ ಉಂಡೆಗಳು ಪತ್ತೆಯಾಗಿದ್ದು, ಹುಸೇನ್ ಅವುಗಳನ್ನು ಕುತೂಹಲದಿಂದ ತಟ್ಟಿದಾಗ ಭಾರೀ ಸ್ಫೋಟ ಸಂಭವಿಸಿ ಆತನ ಅಂಗೈ ಸಂಪೂರ್ಣ ಛಿದ್ರಗೊಂಡಿತ್ತು. ಈ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos