ಕೊಪ್ಪಳ : ಜಿಲ್ಲೆಯಲ್ಲಿ ಎರಡ್ಮೂರು ದಿನಗಳಿಂದ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಗೆ ಮನೆಯ ಛಾವಣಿ ಕುಸಿತಗೊಂಡಿದೆ, ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಸಂಜೆಯ ವೇಳೆ, ಈ ಘಟನೆ ನಡೆದಿದೆ.
ನಿನ್ನೆ ಸಂಜೆ ಸುಮಾರು 6 ಗಂಟೆಯ ವೇಳೆಗೆ ಮುಧೋಳ ಗ್ರಾಮದ ತಿರಣೆಪ್ಪ ಓಲಿ ಎಂಬುವವರ ಮನೆಯ ಹಿಂಭಾಗದ ಛಾವಣಿ ಕುಸಿತಗೊಂಡಿದೆ. ಮನೆಯ ಮುಂಭಾಗದ ಕೋಣೆಯಲ್ಲಿ ಸುಮಾರು ನಾಲ್ಕು ಜನ ಇದ್ದರು.
5 ವರ್ಷದ ಮಗು ಮನೆಯ ಹಿಂಭಾಗದ ಕೋಣೆಗೆ ಹೋಗಿದೆ. ಆಗ ಏಕಾಏಕಿ ಮನೆಯ ಛಾವಣಿ ಕುಸಿದಿದೆ. ಅದೃಷ್ಠವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಛಾವಣಿ ಕುಸಿತದಿಂದ ಮನೆಯೊಳಗೆ ಮಗು ಸಿಲುಕಿದ್ದು, ಮನೆಯವರು ಕೂಗಾಡಿ ಕೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಮಗುವನ್ನು ಸುರಕ್ಷಿತವಾಗಿ ಹೊರಗೆ ಕರೆ ತರುವಲ್ಲಿ ಗ್ರಾಮಸ್ಥರು ಯಶಸ್ವಿ ಗೊಂಡಿದ್ದಾರೆ