ಆರೋಗ್ಯ ಮಂಥನ ಮತ್ತು ಆರೋಗ್ಯ ಪಕ್ವಾನ ಕಾರ್ಯಕ್ರಮ

ಆರೋಗ್ಯ ಮಂಥನ ಮತ್ತು ಆರೋಗ್ಯ ಪಕ್ವಾನ ಕಾರ್ಯಕ್ರಮ

ಔರಾದ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕಯೋಜನೆ ಅಡಿಯಲ್ಲಿ ಮಂಗಳವಾರ ಬೀದರ ಜಿಲ್ಲೆಯ ಔರಾದ ತಾಲೂಕಿನ ಚಿಂತಾಕಿ ಪ್ರಾ.ಆ.ಕೇಂದ್ರ ದಲ್ಲಿ ಆರೋಗ್ಯ ಮಂಥನ ಮತ್ತು ಆರೋಗ್ಯ ಪಕ್ವಾನ ಕಾರ್ಯಕ್ರಮದ ಜನಜಾಗೃತಿ ಜಾಥಾ ವನ್ನು ಡಾ.ಮಹೇಶ ಬಿರಾದಾರ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು ಉದ್ಘಾಟಿಸಿ ಸಾರ್ವಜನಿಕರು ಈ ಕಾರ್ಯಕ್ರಮ ಸದುಪಯೋಗ ಪಡೆಯುವಂತೆ ಕೋರಿದರು.

ಈ ಸಂಧರ್ಭದಲ್ಲಿ ಕಲಬುರಗಿ ವಿಭಾಗ ಮಟ್ಟದ ಸಹಾಯಕ ಪ್ರಾದೇಶಿಕ ಸಮಾಲೋಚಕರಾದ ಡಾ. ಶಂಕರರಾವ ದೇಶಮುಖ, ಡಾ.ಶಿವಕುಮಾರ ಚಿಂತಾಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೀರಶೆಟ್ಟಿ ಚನ್ನಶೆಟ್ಟಿ , ಬಿ.ಹೆಚ್.ಇ.ಒ ಅನಿತಾ, ಅನ್ನಪೂರ್ಣ, ರಮೇಶ, ಜ್ಯೋತಿ, ಆಶಾ ಕಾರ್ಯಕರ್ತೆಯವರು ಸಿಬ್ಬಂದಿಗಳು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos