ಕೊಲ್ಹಾರ: ಆಧುನಿಕ ತಂತ್ರಜ್ಞಾನ, ಜೊತೆ ಪದವಿದರು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕೆಂದು ಶಾಸಕ ಶಿವಾನಂದ ಪಾಟೀಲ ಕರೆ ನೀಡಿದರು. ಬುಧವಾರ ಇಲ್ಲಿ ನಡೆದ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ, ಯುವ ಸಾಹಿತಿ, ಶಿಕ್ಷಕ ಜಗದೀಶ ಸಾಲಳ್ಳಿಯವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ತೆಲಗಿ ಆರ್ಎಸ್ ಕೇಂದ್ರದಲ್ಲಿರುವ ಉರ್ದು ಪ್ರಾಥಮಿಕ ಶಾಲಾ ಅಲ್ಲೇ ಮುಂದುವರೆಸಲು ಶಿಕ್ಷಣಾಧಿಕಾರಿಗಳ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು. ಪದವಿ ಮಹಾವಿದ್ಯಾಲಯ ಪ್ರಾಂಭಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರ ಪರವಾಗಿ ಸಂತೋಷ ಚನಗೊಂಡ ಮನವಿ ಮಾಡಿದರು.