ಹಾಸನಾಂಬೆ ತಾಯಿ ಕೈ ಬಿಡಲ್ಲ : ನಟಿ ತಾರಾ

ಹಾಸನಾಂಬೆ ತಾಯಿ ಕೈ ಬಿಡಲ್ಲ : ನಟಿ ತಾರಾ

ಹಾಸನ,ಅ. 21 : ತಾಯಿ ಎಲ್ಲರನ್ನೂ ಕಾಪಾಡುತ್ತಾಳೆ. ಈ ಬಾರಿಯೂ ವೈಯಕ್ತಿಕ ಹಾಗೂ ದೇಶದ ಒಳಿತನ ಬಗ್ಗೆ ಬಹಳ ಕೇಳಿಕೊಂಡಿದ್ದೇನೆ ಎಂದು ಚಿತ್ರನಟಿ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇಡಿಕೊಂಡಿದ್ದನ್ನು ತಾಯಿ ಹಾಸನಾಂಬೆ ಈಡೇರಿಸಿದ್ದಾಳೆ. ಆಕೆಯ ಮೇಲೆ ನನಗೆ ನಂಬಿಕೆಯಿದೆ ಎಂದರು. ಕಳೆದ ವರ್ಷ ವೈಯಕ್ತಿಕ ಕಾರಣಗಳಿಂದ ಬರಲಿಲ್ಲ. ಅದರಿಂದ ನನಗೆ ಬಹಳ ಬೇಜಾರಾಗಿತ್ತು. ಅಷ್ಟಮಿ ದಿನ ಬಂದಿದ್ದು ಖುಷಿ ತಂದಿದೆ ಎಂದರು. ಹಾಸನಾಂಬೆ ದರ್ಶನ ಪಡೆದರು. ದರ್ಬಾರ್ ಗಣಪತಿಗೆ ನಮಿಸಿ, ಸಿದ್ದೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ನೆರವೇರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos