ಕೆ.ಆರ್.ಪುರಂ, ಡಿ. 05: ಇಂದು ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ನಡೆಯುತ್ತಿದ್ದು, ಕೆ.ಆರ್.ಪುರಂ ಕ್ಷೇತ್ರದಲ್ಲಿ ನಟಿ ಹರ್ಷಿಕಾ ಪೂಣಚ್ಚ ಅವರು ಮತದಾನ ಹಕ್ಕನ್ನು ಚಲಾಯಿಸಿದರೆ. ಮತದಾನ ಚಲಾಯಿಸಿದ ನಂತರ ಅಪ್ಪನನ್ನು ನೆನೆದು ಕಣ್ಣೀರು ಹಾಕಿದರು.
ಮತದಾನ ಮಾಡಿದ್ದು ಖುಷಿಯಾಯ್ತು ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಮತದಾನ ಮಾಡಬೇಕು. ನಿಮಗೆ ಯಾರು ಸೂಕ್ತ ಅನಿಸುತ್ತೆ ಅವರಿಗೆ ಮತದಾನ ಹಾಕಿ. ಇಂದು ಉಪ ಚುನಾವಣೆಯ ಪ್ರಯುಕ್ತ ಸುಮಾರು ಕಂಪನಿಗಳಿಗೆ ರಜೆ ಕೊಟ್ಟಿದ್ದಾರೆ. ಆದ್ದರಿಂದ ಎಲ್ಲರು ಬಂದು ಮತದಾನ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿದರು.
ಇಂದು ನಾವು ಯಾರಿಗೂ ವೋಟ್ ಮಾಡಿಲ್ಲ ಅಂದರೆ ಮುಂದೆ, ನಾವೇ ತೊಂದರೆ ಪಡಬೇಕಾಗುತ್ತದೆ. ಮನೇಲಿ ಕೂತ್ಕೊಂಡು ಏನೇ ದೂರು ಕೊಟ್ಟರು, ಏನು ಪ್ರಯೋಜನ ಆಗಲ್ಲ. ನನಗೂ ಕೂಡ ವೈಯಕ್ತಿಕ ಕೆಲಸ ಇದೆ, ಹಾಗಂತ ವೋಟ್ ಹಾಕೋದು ಮರೆಯಬಾರದು.
ಕಳೆದ ಸಲದ ತಂದೆಯೊಂದಿಗೆ ನಾನು ಮತದಾನ ಮಾಡಲು ಬಂದಿದ್ದೆ ಆದರೆ ಈಗ ನನ್ನ ತಂದೆ ಎರಡು ತಿಂಗಳ ಹಿಂದೆ ನನ್ನ ಬಿಟ್ಟು ಅಗಲಿದ್ದಾರೆ ಎಂದು ತಂದೆಯನ್ನ ನೆನೆದು ಭಾವುಕರಾಗಿ, ಕಣ್ಣಿರಿಟ್ಟಿದ್ದಾರೆ ಹರ್ಷಿಕಾ.
ನಮ್ಮ ಮತ, ನಮ್ಮ ಹಕ್ಕು, ಖಂಡಿತವಾಗಿ ಚಲಾವಣೆ ಮಾಡಲೇಬೇಕು ಯಾರು ನಿರ್ಲಕ್ಷ್ಯ ಮಾಡಬೇಡಿ. ಬೇಗ ಬೇಗ ಬಂದು ವೋಟ್ ಮಾಡಿ ಎಂದು ಜನರಲ್ಲಿ ನಟಿ ಹರ್ಷಿಕಾ ಪೂಣಚ್ಚ ಮನವಿ ಮಾಡಿದರು