ಸಿರುಗುಪ್ಪ: ನಗರದ ಹುಡ್ಕೊ ಕಾಲೋನಿಯಲ್ಲಿರುವ ಸಿರಿಸಾಂಸ್ಕೃತಿಕ ಸಂಗೀತ ಪಾಠಶಾಲೆಯಲ್ಲಿ, ಹಾನಗಲ್ಲ ಶ್ರೀ ಗುರುಕುಮಾರೇಶ್ವರರ ಜಯಂತೋತ್ಸವ ಆಚರಣೆಗೊಂಡಿತು.
ಸಂಗೀತ ಪಾಠಶಾಲೆಗೆ ಜಯಂತಿ ಕಾರ್ಯಕ್ರಮ ಆಚರಿಸಲು ಅವರ ಅನೇಕ ಶಿಷ್ಯರು ಮತ್ತು ಭಕ್ತರು ಆಗಮಿಸಿದ್ದರು ಪಾಠಶಾಲೆಯ ಅಧ್ಯಾಪಕ ಶಾಂತಕುಮಾರ್ ಸ್ವಾಮಿ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಶ್ಪಾರ್ಚನೆ ಮಾಡುವುದರ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ನಡೆದ ಸುಶ್ರಾವ್ಯ ಸಂಗೀತ ಕಾರ್ಯಕ್ರಮದಲ್ಲಿ ಶಾಂತಕುಮಾರ್ ಸ್ವಾಮಿ ಮತ್ತು ನಾ ಮ ಜಗದೀಶ್ ಇವರುಗಳು ಗುರುಕುಮಾರೇಶ್ವರರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಇವರೊಂದಿಗೆ ನಾಗರಾಜ್ ಸ್ವಾಮಿ ದೇಶನೂರು ವೆಂಕಟೇಶ್ ಕುಮಾರ್ ಮಂಜುನಾಥ್ ಅಂಗಡಿ ಧ್ವನಿಗೂಡಿಸಿದರು. ತಬಲ ಸಾಥನ್ನು ಹರೀಶ ಸಿರುಗುಪ್ಪ ಮತ್ತು ವಿಶ್ವನಾಥ್ ದೇಶನೂರು ಇವರುಗಳು ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ದೊಡ್ಡ ರಾಮರೆಡ್ಡಿ ಸೇರಿದಂತೆ ಅನೇಕ ಭಕ್ತರು ಇದ್ದರು