ಸರ್ಕಾರದ ಆದೇಶ ಉಲ್ಲಂಘನೆ: 7 ಮಂದಿ ಬಂಧನ

ಸರ್ಕಾರದ ಆದೇಶ ಉಲ್ಲಂಘನೆ: 7 ಮಂದಿ ಬಂಧನ

ಮಂಗಳೂರು, ಮಾ. 24: ಮಾರಕ ಕೊರೊನಾ ಸೋಂಕು ದೇಶದೆಲ್ಲೆಡೆ ಆತಂಕ ಸೃಷ್ಟಿಸಿದ್ದು, ಜನತೆ ತಲ್ಲಣಗೊಂಡಿದ್ದಾರೆ. ಮಾರಕ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಇಂದಿನಿಂದ ಮಾ.31ರವರೆಗೆ ಸಂಪೂರ್ಣ ಕರ್ನಾಟಕ ಲಾಕ್ ಡೌನ್ ಗೆ ಸರ್ಕಾರ ಆದೇಶ ನೀಡಿದೆ. ಅಲ್ಲದೇ, ಈ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆದೇಶಿಸಿದ್ದರೂ ಜನತೆ ತಲೆಕೆಡಿಸಿಕೊಂಡಿಲ್ಲ. ಈ ನಡುವೆ, ಮಂಗಳೂರಿನಲ್ಲಿ ಆದೇಶ ಉಲ್ಲಂಘಿಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಂದಿನಿಂದ ಮಾ.31ರವರೆಗೆ ಸಂಪೂರ್ಣ ಕರ್ನಾಟಕ ಲಾಕ್ ಡೌನ್ ಘೋಷಿಸಿದ್ದರೂ, ಇಂದು ಹಲವೆಡೆ ಜನತೆ ಮಾತ್ರ ಕ್ಯಾರೆ ಅಂದಿರಲಿಲ್ಲ. ಮಾರುಕಟ್ಟೆಗಳಲ್ಲಿ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ಪೊಲೀಸರು ಜನರನ್ನು ವಾಪಾಸ್ ಕಳುಹಿಸಲು ಹರಸಾಹಸವನ್ನೇ ನಡೆಸಬೇಕಾಗುತಿದೆ. ಈ ನಡುವೆ, ಹಲವೆಡೆ ವಾಹನ ಸವಾರರು ಕೂಡ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದರು. ಪೊಲೀಸರು ಅವರನ್ನು ಪರಿಶೀಲಿಸಿ ವಾಪಾಸ್ ಕಳುಹಿಸುತ್ತಿದ್ದ ದೃಶ್ಯ ಬಹುತೇಕ ಕಡೆ ಸಾಮಾನ್ಯವಾಗಿತ್ತು. ಈ ನಡುವೆ, ಮಂಗಳೂರಿನಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿ ತೆರಳಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos