ಕೊಪ್ಪಳ, ಏ. 02: ಕರೋನಾ ವೈರಸ್ ನಿಂದ ದುಡಿಮೆ ಇಲ್ಲದೆ ಮನೆಯಲ್ಲಿಯೇ ಇರುವ ಕಡು ಬಡವರಿಗಾಗಿ ತಮ್ಮ ಕೈಲಾದ ಸಹಾಯವನ್ನು ಬಿಜೆಪಿ ಹಿರಿಯ ಮುಖಂಡ ಕೊಪ್ಪಳ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ರಾಘವೇಂದ್ರ ಶೆಟ್ಟಿಯವರು ಇಂದು ಸಂಗಾಪುರ, ಮಲ್ಲಾಪುರ, ಆನೆಗೊಂದಿ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಪೂರ್ಣ ನಿರ್ಗತಿಕ ಬಡವರಿಗಾಗಿ 150 ಪ್ಯಾಕೆಟ್ ಅಕ್ಕಿಯನ್ನು ಉಚಿತವಾಗಿ ನೀಡಿದ್ದಾರೆ. ಮತ್ತು 14ನೇ ತಾರೀಖಿನವರೆಗೂ ಪ್ರತಿನಿತ್ಯ ಎರಡು ನೂರು ಜನ ನಿರ್ಗತಿಕ ಬಡವರಿಗೆ ಅಕ್ಕಿಯ ನೀಡಲಾಗುವುದು ಎಂದು ಪತ್ರಿಕೆಯೊಂದಿಗೆ ಶೆಟ್ಟಿ ಅವರು ತಿಳಿಸಿದ್ದಾರೆ.