ಮಾಜಿ ಸಿಎಂ ಅಖಿಲೇಶ್ ಯಾದವ್ ವಿಧಾನ ಸಭೆ ಎದುರು ಧರಣಿ!

ಮಾಜಿ ಸಿಎಂ ಅಖಿಲೇಶ್ ಯಾದವ್ ವಿಧಾನ ಸಭೆ ಎದುರು ಧರಣಿ!

ಲಕ್ನೋ, ಡಿ. 07: ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿಗಳಿಂದಲೇ ಮತ್ತೆ ಅತ್ಯಾಚಾರ ನಡೆಸಿ, ಪೆಟ್ರೋಲ್ ಸುರಿದು ಸುಟ್ಟಿದ್ದರಿಂದ ಇಂದು ಉನ್ನಾವೋ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಸಂತ್ರಸ್ತೆಯ ಸಾವಿಗೆ ನ್ಯಾಯ ದೊರಕಿಸಿಕೊಬೇಕು ಎಂದು ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮಾಜಿ ಸಿಎಂ ಅಖಿಲೇಶ್ ಯಾದವ್ ವಿಧಾನ ಸಭೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಅಖಿಲೇಶ್ ಯಾದವ್, ಇದೊಂದು ಹೀನಾಯ ಕೃತ್ಯ, ಬಿಜೆಪಿ ಆಡಳಿತದ ಸಮಯದಲ್ಲಿ ಇಂಥ ಪ್ರಕರಣ ನಡೆದಿರೋದು ಇದೇ ಮೊದಲೇನಲ್ಲ, ಮಖ್ಯಮಂತ್ರಿ ಅಸೆಂಬ್ಲಿಯಲ್ಲಿ ಅಪರಾಧಿಗಳನ್ನ ಹೊಡೆದುಹಾಕಲಾಗುತ್ತೆ ಎಂದಿದ್ರು.. ಆದ್ರೆ ಆ ಮಗಳ ಪ್ರಾಣ ಉಳಿಸಲು ಅವರಿಂದ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿವರೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ, ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ರಾಜೀನಾಮೆ ಕೊಟ್ಟಿಲ್ಲ, ಈ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ. ನಾಳೆ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳಲ್ಲಿ ಶೋಕಸಭೆ ನಡೆಸಲಾಗುವುದು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos