ರೈತ ಆತ್ಮಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವರ ಭೆಟ್ಟಿ

ರೈತ ಆತ್ಮಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವರ ಭೆಟ್ಟಿ

ವಿಜಯಪುರ, ಜ. 17: ತಿಕೊಟಾ ಹತ್ತಿರದ ಬಾಬಾನಗರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಸಂಗಪ್ಪ ಶಿವಪ್ಪ ಚಕ್ಕಿ  ಇವರ ಮನೆಗೆ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಭೆಟ್ಟಿ ನೀಡಿ ಮೃತ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೃತ ರೈತನಿಗೆ ತಾಯಿ, ಪತ್ನಿ ಒಬ್ಬ ಪುತ್ರ ಹಾಗೂ ಒಬ್ಬಳು ಪುತ್ರಿ ಇದ್ದು, ಕುಟುಂಬಸ್ಥರಿಗೆ ಪರಿಹಾರಕ್ಕಾಗಿ ಸ್ಥಳದಲ್ಲಿಯೇ ಸಂಬಂದಪಟ್ಟ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಯಾದ ತಹಶೀಲ್ದಾರ ಇವರಿಗೆ ಶೀಘ್ರವೆ ಸಕಲ ಸರಕಾರಿ ಸೌಲಭ್ಯ ಕಲ್ಪಿಸಲು ಸೂಚಿಸಿದರು.

ಇದೆ ಸಂದರ್ಭದಲ್ಲಿ  ಬಬಲೆಶ್ವರ ಮತಕ್ಶೆತ್ರದ ಬಿಜೆಪಿ ನಾಯಕ ವಿಜುಗೌಡ ಪಾಟೀಲ ಎ.ಪಿ.ಎಮ್.ಸಿ ಅದ್ಯಕ್ಷ ಸುರೇಶಗೌಡ ಪಾಟೀಲ. ತೋಟಗಾರಿಕೆ ಉಪ ನಿರ್ದೇಶಕರು ಸಂತೋಷ ಇಮಾಮ್ ದಾರ್. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ತಿಕೋಟಾ ತಹಶಿಲ್ದಾರ  ರುದ್ರಗೌಡರ ಸೇರಿದಂತೆ ಅನೇಕ ಮುಖಂಡರು ಮತ್ತು ಅಧಿಕಾರಿಗಳು ಮೃತರ ಕುಟುಂಬದ ಸದಸ್ಯರಿಗೆ ಸಂತ್ವಾನ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos