ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ

ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ

ಪೀಣ್ಯ ದಾಸರಹಳ್ಳಿ, ಸೆ. 13: ದಾಸರಹಳ್ಳಿ ಸಮೀಪ ರಾಜಗೋಪಾಲ್ ನಗರದ ರಾಮಯ್ಯ ಬಡಾವಣೆಯಹತ್ತಿರ  ಡಾ!! ಪ್ರವೀಣ್ ಭಾಯಿ ತೊಗಾಡಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ  ಹಿಂದೇಟು  ಹಾಕುತಿರುವ ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಕಾರಣವೆಂದು  ಹೇಳಿದರು .

ವಾಸ್ಕ್ ಯೋಗ ಕೇಂದ್ರದ ಯೋಗ ಗುರು  ಉಮಾಮಹೇಶ್ವರ ಮಾತನಾಡಿ ಭಾರತ ದೇಶದಲ್ಲಿ ಪ್ರಪ್ರಥಮ ಹಿಂದೂ ಗಣಪತಿ ಸಾರ್ವಜನಿಕವಾಗಿ ಸ್ಥಾಪನೆ ಮಾಡಿ ಹಿಂದೂಗಳನ್ನು ಒಗ್ಗೂಡಿಸುವ ಜಾಗೃತಿ ಮಾಡಬೇಕು. ಹಾಗೂ  ಅಂತಾರಾಷ್ಟ್ರೀಯ ಹಿಂದು ಪರಿಷತ್ ರಾಜ್ಯ ಅಧ್ಯಕ್ಷ ವಿ.ಆನಂದ ಶ್ರಮಕೆ ಫಲಸಿಗಲೆಂದು ಆಶಿಸುತ್ತೇನೆ ಎಂದು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಹೆಲ್ತ್ ಲೈನ್ ಖಜಾಂಚಿ ವಿಜಯಕುಮಾರ್ ರೆಡ್ಡಿ, ಬಿಜೆಪಿ ಮುಖಂಡ ಮುನಿರಾಜು, ರವಿ, ಉಪಾಧ್ಯಕ್ಷ ವೆಂಕಟೇಶ್, ಲಿಂಗದೇವರು, ನಾಗರಾಜ್, ಅಟೋ ಚಾಲಕರ ಸಂಘದ ಅಧ್ಯಕ್ಷ ಭೋಜಪ್ಪ ಗನ್ ಮ್ಯಾನ್, ಭೊವಿ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಆರತಿ.ಎಂ ಮುಂತಾದವರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos