ಶಿವಮೊಗ್ಗ, ಡಿ. 14: ಉಪಚುನಾವಣೆಯಲ್ಲಿ ಗೆದ್ದು ಸರ್ಕಾರ ಉಳಿಸಿಕೊಂಡ ಖುಷಿಯಲ್ಲಿರೋ ಬಿಜೆಪಿ ಸರ್ಕಾರಕ್ಕೆ ಹೊಸ ಟೆನ್ಶನ್ ಶುರುವಾಗಿದೆ. ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ದೊಡ್ಡ ದೊಡ್ಡ ಬಿಜೆಪಿ ನಾಯಕರಿಗೇ ಕೊಕ್ ಸಿಗುತ್ತಾ ಅನ್ನೋ ಅನುಮಾನ ಕಾಡುತ್ತಿದೆ. ಸಚಿವ ಕೆ.ಎಸ್. ಈಶ್ವರಪ್ಪ ಇಂದು ಶಿವಮೊಗ್ಗದಲ್ಲಿ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ.
ಸಂಪುಟ ವಿಸ್ತರಣೆಯಾಗುತ್ತಾ ಅಂತ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಸ್ತರಣೆ ಬಗ್ಗೆ ಕೇಳ್ತಿದ್ದೀರಿ. ನಿಮ್ಮ ಖಾತೆ ಉಳಿಯುತ್ತಾ..? ಮಂತ್ರಿಯಾಗಿ ಇರುತ್ತೀರಾ ಅಂತ ಕೇಳಲಿಲ್ಲವಲ್ಲ ಅಂತ ಹೇಳಿದ್ರು. ಜೊತೆಗೆ ಸುಭದ್ರ ಮತ್ತು ಅಭಿವೃದ್ಧಿಪರ ಆಡಳಿತ ನೀಡೋದು ಬಿಜೆಪಿ ಸರ್ಕಾರದ ಉದ್ದೇಶವಾಗಿದೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಏನು ಬೇಕಾದರೂ ಆಗಬಹುದು. ನಾನು ಮಂತ್ರಿಯಾಗಿಯೇ ಇರುತ್ತೇನೋ ಬಿಡುತ್ತೇನೋ ಗೊತ್ತಿಲ್ಲ ಎಂದರು.