ಎಸ್. ನಾರಾಯಣ್ ರ 2ನೇ ಪುತ್ರ ಸಿನಿಮಾಗೆ ಎಂಟ್ರಿ

ಎಸ್. ನಾರಾಯಣ್ ರ   2ನೇ ಪುತ್ರ ಸಿನಿಮಾಗೆ ಎಂಟ್ರಿ

ಬೆಂಗಳೂರು, ಡಿ. 05: ಕನ್ನಡ ಚಿತ್ರರಂಗದ ನಟ, ನಿರ್ಮಾಪಕ, ನಿರ್ದೇಶಕ ಎಸ್ ನಾರಾಯಣ್ ಅವರ ಮೊದಲ ಪಂಕಜ್ ಈಗಾಗಲೇ ನಾಯಕನಾಗಿ ಎಂಟ್ರಿ ಕೊಟ್ಟು ಸಿನಿಮಾ ಮಾಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ಅವರ ಎರಡನೇ ಪುತ್ರ ಪವನ್ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ.

ಇತ್ತಿಚೆಗಷ್ಟೇ ಪವನ್ ನಾರಾಯಣ್ ನಾಯಕ ನಟನಾಗಿ ನಟಿಸುತ್ತಿರುವ ‘ಮುತ್ತು ರತ್ನ’ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಈ ಕಾರ್ಯಕ್ರಮಕ್ಕೆ ನಟ ಶ್ರೀ ಮುರುಳಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಆಗಮಿಸಿ ಶುಭ ಹಾರೈಸಿದ್ದಾರೆ.

ಗೊತ್ತು ಗುರಿ ಇಲ್ಲದ, ಬದುಕಿನ ಬಗ್ಗೆ ಕಾಳಜಿಯೇ ಇರದ ಹುಡುಗನ ಲೈಫಲ್ಲಿ ಆ ಹುಡುಗಿ ಎಂಟ್ರಿಯಾದಾಗ, ಏನೆಲ್ಲಾ ಅವಘಡಗಳು ನಡೆಯುತ್ತವೆ. ಆಕೆ ಅವನ ಜೊತೆ ಇದ್ದಾಗ, ಹೇಗೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದು ಚಿತ್ರದ ಕತೆಯಾಗಿದೆ.

ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಪವನ್ ನಾರಾಯಣ್ ಗೆ ನಾಯಕಿಯಾಗಿ ಅಂಜನಾ ಗೌಡ ನಾಯಕಿ ಆಗಿದ್ದಾರೆ. ಚಿತ್ರವನ್ನು ಶ್ರೀಕಾಂತ್ ಹುಣಸೂರುನಿರ್ದೇಶನ ಮಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos