ಹೊಲಿಗೆ ಕೇಂದ್ರಕ್ಕೆ ಚಾಲನೆ

ಹೊಲಿಗೆ ಕೇಂದ್ರಕ್ಕೆ ಚಾಲನೆ

ಕಮಲನಗರ: ಕಮಲನಗರ ತಾಲ್ಲೂಕಿನ ಠಾಣಾ ಕುಶನೂರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ ಕೌಶಲ್ಯ ಕೇಂದ್ರ (ಹೊಲಿಗೆ ಕೇಂದ್ರ)ಕ್ಕೆ ಗ್ರಾ.ಪಂ. ಸದಸ್ಯರಾದ ನಾಗರಾಜ್ ಬಿರಾದಾರ್ ನೀಡೋದಾ ಅವರು ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಲ್ಬುರ್ಗಿ ವಿಭಾಗದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಅವರ ಸಂಸ್ಥೆ ವತಿಯಿಂದ ಕಲ್ಬುರ್ಗಿ, ರಾಯಚೂರು, ಬೀದರ್ ಸೇರಿದಂತೆ ಬಡ ಕುಟುಂಬ ಮಹಿಳೆಯರಿಗೆ ಹೊಲಿಗೆ ಯಂತ್ರ ತರಬೇತಿ ಪಡೆದು ಸ್ವಾವಲಂಬಿ, ಸುಖಕರ ಜೀವನ ಸಾಗಿಸಲು ಮುಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲಾ ಸಂಚಾಲಕರಾದ ಮಹಾದೇವ ಮಸ್ಕಲೆ, ತಾಲೂಕು ಸಂಯೋಜಕರಾದ ಸಂತೋಷ ವಾಡೆಕರ, ರವಿ ಪಾಂಚಾಳ, ಸುಭಾಷ ಪಾಂಚಾಳ, ಅಂಬಾದಾಸ ಪಾಂಚಾಳ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos