ಹುಬ್ಬಳ್ಳಿ, ಜ. 23: ನಗರದ ಕೆಲವು ಬಡಾವಣೆಗಳಿಗೆ ನೀರು ಪೂರೈಕೆ ಮಾಡುವ ಟ್ಯಾಂಕರ್ ಸ್ವಚ್ಚಗೊಳಿಸಿದ ನೀರನ್ನು ಚರಂಡಿಗೆ ಹರಿಬಿಟ್ಟ ಪರಿಣಾಮ ಸಾರ್ವಜನಿಕರು ಪರದಾಡಿದ ಘಟನೆ ನಡೆದಿದೆ.
ಸ್ವಚ್ಚಗೊಳಿಸಿದ ಕಲುಷಿತ ನೀರನ್ನು ಚರಂಡಿಗೆ ಹರಿಬಿಟ್ಟ ಕಾರಣ ಪ್ರೆಸ್ ಕ್ಲಬ್ ಬಳಿ ರಸ್ತೆಯ ತುಂಬ ನೀರು ಹರಿದಿದೆ. ಪರಿಣಾಮ ಸಾರ್ವಜನಿಕರು, ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನಿಭವಿಸಬೇಕಾಯಿತು. ನಗರದ ಲ್ಯಾಮಿಂಗ್ಟನ್ ರಸ್ತೆಯ ಪಕ್ಕದ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿರುವ ನೀರಿನ ಟ್ಯಾಂಕರ್ ಸ್ವಚ್ಚ ಮಾಡಿ ತಿಂಗಳಿಗೊಮ್ಮೆ ಈ ರೀತಿ ಕಲುಷಿತ ನೀರನ್ನು ಹರಿಬಿಡುತ್ತಿದ್ದು, ಪದೇ ಪದೇ ತೊಂದರೆ ಅನುಭವಿಸುವಂತಾಗಿದೆ. ಪಾಲಿಕೆಯ ವಿರುದ್ದ ಸಾರ್ವಜನಿಕರು ಹಿಡಿಶಾಪಹಾಕುತ್ತಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.