ಜಿಲ್ಲಾ ಆರೋಗ್ಯ ಅಧಿಕಾರಿ ಔರಾದಗೆ ಭೇಟಿ : ವಿಜಯರಡ್ಡಿ

ಜಿಲ್ಲಾ ಆರೋಗ್ಯ ಅಧಿಕಾರಿ ಔರಾದಗೆ ಭೇಟಿ : ವಿಜಯರಡ್ಡಿ

ಔರಾದ:  ಸಾರ್ವಜನಿಕ ಆಸ್ಪತ್ರೆ ಜಿಲ್ಲಾ ಆರೋಗ್ಯ ಅಧಿಕಾರಿ ವಿಜಯ ರೆಡ್ಡಿ ಅವರು ಇಂದು ಭೇಟಿಕೊಟ್ಟು ಸಿಬ್ಬಂದಿಗಳಲ್ಲಿ ಸಂಚಲನ ಮೂಡಿಸಿದ್ದಾರೆ.

ಜಿಲ್ಲಾ ಆರೋಗ್ಯ ಅಧಿಕಾರಿ ಆಸ್ಪತ್ರೆಯ ಪ್ರತಿಯೊಂದು ವಾರ್ಡ್‍ಗಳಿಗೆ ಹೋಗಿ ಪರಿಶೀಲನೆ ಮಾಡಿ ಸ್ವಚ್ಛತೆ, ಶೌಚಾಲಯಗಳ ನಿರ್ವಹಣೆ ಬಗ್ಗೆ ಸ್ವಚ್ಛತೆ ಇಲ್ಲದ ರಿಂದ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.
ಡಿ ಗ್ರೂಪ್ ನೌಕರಿಗಳಿಗೆ ಸ್ವಚ್ಛತೆ ಇಲ್ಲದೆ ನೋಡಿ ಇನ್ನು ಮುಂದೆ ಇದೇ ತರ ಇದ್ದರೆ ನಿಮ್ಮನ್ನು ಕೆಲಸದಿಂದ ತೆಗೆಯಬೇಕಾಗುತ್ತದೆ ಎಂದರು, ಪ್ರತಿಯೊಬ್ಬರು ಕೆಲಸವನ್ನು ಚೆನ್ನಾಗಿ ನಿರ್ವಹಿಸಿ ಎಂದು ನೌಕರರಿಗೆ ತಿಳಿಸಿದರು.

ಆಸ್ಪತ್ರೆಯಲ್ಲಿ ಮೆಡಿಸಿನ್ ಇಲ್ಲದೆ ಹೊರಗಡೆಯಿಂದ ಚೀಟಿ ಬರೆದುಕೊಡುವುದು ನಿಲ್ಲಿಸಿ ಮೆಡಿಸನ್ ಎಲ್ಲವನ್ನು ಸ್ಟಾಕ್ ಆಗಿ ಇಟ್ಟುಕೊಳ್ಳಿ ಎಂದು ಸಿಬ್ಬಂದಿಗಳಿಗೆ ಸೂಚನೆಯನ್ನು ಕೊಟ್ಟರು
ಇದೇ ಸಂದರ್ಭದಲ್ಲಿ ಟಿ.ಎಚ್.ಒ ಪ್ರವೀನಕುಮಾರ, ಸಿ.ಎಮ್.ಒ ಸಿದ್ದಾರ್ಥ್, ಡಾ. ರಮನ ಪೋಕಲವಾರ, ಡಾ. ಪ್ರಮೋದ, ಶ್ರೀಮತಿ ಇಂದ್ರಾಬಾಯಿ, ಸಿಬ್ಬಂದಿ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos