ಅಂಗವಿಕಲರಿಗೆ ಆಹಾರ ಕಿಟ್ ವಿತರಣೆ

ಅಂಗವಿಕಲರಿಗೆ ಆಹಾರ ಕಿಟ್ ವಿತರಣೆ

ಸಿಂದಗಿ: ಕೊರೋನಾ ಎರಡನೇಯ ಅಲೆಯಲ್ಲಿ ತತ್ತರಿಸಿ ಹೋಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಗವಿಕಲರಿಗೆ ಸಿಂದಗಿ ವಿಧಾನಸಭಾ ಕ್ಷೇತ್ರದ ಅಹಿಂದ ನಾಯಕ ಹಾಗೂ ಪ್ರಥಮದರ್ಜೆ ಗುತ್ತಿದಾರ ಮಹಿಬೂಬಸಾಬ.ಆರ್. ತಾಂಬೋಳಿ ಎಮ್‌ಆರ್‌ಟಿ ಉದಾರತೆ ಮನೋಭಾವನೆ ತೋರಿದ್ದಾರೆ ಎಂದು ರಾಜ್ಯಾಧ್ಯಕ್ಷೆ ಸಬೀಯಾಬೇಗಂ ಮರ್ತೂರ ಹೇಳಿದರು.
ಪಟ್ಟಣದ ಮೈಹಿಬೂಬಸಾಬ ಆರ್ ತಾಂಬೋಳಿ ಎಮ್‌ಆರ್‌ಟಿ ಪ್ರಥಮದರ್ಜೆ ಗುತ್ತಿದಾರರು ಹಾಗೂ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಸಿಂದಗಿ, ಆರ್.ಪಿ.ಡಿ ಟಾಸ್ಕ್ಫೋರ್ಸ್ ಇವುಗಳ ಸಹಯೋಗದಲ್ಲಿ ಲಾಕ್‌ಡೌನ್‌ದಿಂದ ಸಂಕಷ್ಟಗೊಳಗಾಗಿರುವ ಸಿಂದಗಿ ಮತ್ತು ರಾಂಪೂರ ಪಿಎ ಗ್ರಾಮದ ಅಂಗವಿಕಲರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿ, ಗುತ್ತಿದಾರರು ಅವರ ಸೇವೆ ಬಹಳ ಅಗಾಧವಾಗಿದ್ದು ಸಮಾಜದ ಮುಖ್ಯವಾಹಿನಿಗೆ ಬಾರದೇ ಇರುವ ಅಂಗವಿಕಲರ ನೋವಿಗೆ ಸ್ಪಂದಿಸಿ 130 ಕ್ಕೂ ಹೆಚ್ಚು ಆಹಾರ ಕಿಟ್ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಯುಮ ತಾಂಬೋಳಿ, ಅಲ್ಲಿಸಾಬ ಹುಂಡೆಕಾರ, ದಾವಲಸಾಬ ಮರ್ತೂರ, ರಾಜು ಯಡ್ರಾಮಿ, ಪುಂಡಲೀಕ, ಇನ್ನಿತರ ನಾಯಕರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos