ಗಂಗಾವತಿ, ಏ. 04: ಗಂಗಾವತಿ ಎಪಿಎಂಸಿ ಸದಸ್ಯರಾದ ರೆಡ್ಡಿ ಶ್ರೀನಿವಾಸ್ ಇವರ ನೇತೃತ್ವದಲ್ಲಿ ರೈತರಿಂದ ನೇರವಾಗಿ ತರಕಾರಿ ಮತ್ತು ಸೊಪ್ಪುಗಳನ್ನು ಖರೀದಿ ಮಾಡಿ ಲಾಭವಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ವಿಶೇಷವಾಗಿತ್ತು.ಶ್ರೀರಾಮನಗರದಲ್ಲಿ ಮತ್ತು ಗಂಗಾವತಿ ನಗರದ ಪೊಲೀಸ್ ಕಾಲೋನಿಯಲ್ಲಿ ಸಾರ್ವಜನಿಕರಿಗಾಗಿ ತರಕಾರಿ ಮತ್ತು ಸೊಪ್ಪು ಗಳನ್ನು ಲಾಭವಿಲ್ಲದೆ ಮಾರಾಟ ಮಾಡಲಾಯಿತು. ಇದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕಾಲೋನಿ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಕರೋನ ಬಗ್ಗೆ ಜಾಗೃತಿ ಮೂಡಿಸಿದರು.