ದೇವೇಗೌಡರು ಕ್ಷೇತ್ರ ಬಿಟ್ಟುಕೊಡಲಿ: ಮುದ್ದಹನುಮೇಗೌಡ

ದೇವೇಗೌಡರು ಕ್ಷೇತ್ರ ಬಿಟ್ಟುಕೊಡಲಿ: ಮುದ್ದಹನುಮೇಗೌಡ

ತುಮಕೂರು, ಮಾ. 27, ನ್ಯೂಸ್ ಎಕ್ಸ್ ಪ್ರೆಸ್: ತುಮಕೂರು ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡನವರು,  ಹೆಚ್.ಡಿ ದೇವೇಗೌಡರು ದೊಡ್ಡ ಮನಸ್ಸು ಮಾಡಿ ಕ್ಷೇತ್ರ ಬಿಟ್ಟುಕೊಡಲಿ. ನಾಮಪತ್ರ ವಾಪಸ್ ಪಡೆಯಲು ಇನ್ನೂ ಸಮಯಾವಕಾಶ ಇದೆ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ  ಮಾತನಾಡಿದ ಅವರು, ದೇಶದಲ್ಲಿರುವ ಪಕ್ಷದ ಯಾವ ಸಂಸದರ ಪರಿಸ್ಥಿತಿ ಹೀಗೆ ಆಗಿಲ್ಲ. ಆದರೆ, ನನಗೆ ಹೀಗೆ ಆಗುತ್ತೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಯಾವುದೇ ಕಾರಣ ಕೊಡದೇ ನನಗೆ ಟಿಕೆಟ್ ನೀಡಿಲ್ಲ.

ಯಾಕೆ ನನ್ನ ಕೈ ಬಿಟ್ಟಿರೋದು ಅನ್ನುವ ಬಗ್ಗೆ ಮೊದಲು ಕಾರಣ ನೀಡಲಿ ಪಕ್ಷದ ನಾಯಕರು ಹೇಳಿದಾಕ್ಷಣ ನಾಮಪತ್ರ ಹಿಂಪಡೆಯುವುದಿಲ್ಲ. ಕ್ಷೇತ್ರದ ಮತದಾರರ ಅಭಿಪ್ರಾಯದ ಮೇರೆಗೆ ಮುಂದೆ ನನ್ನ ತೀರ್ಮಾನ.

ಪಕ್ಷದ ನಾಯಕರು ನನ್ನನ್ನ ಭೇಟಿ ಮಾಡಬೇಕೆಂದು ಹೇಳಿದ್ದಾರೆ. ನಾನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಮನವೊಲಿಕೆ ಮಾಡಿದ್ದಾರೆಂದು ಈಗಲೇ ನಾನು ಏನು ಹೇಳುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos