ಖತರ್ನಾಕ್ ಕಳ್ಳನ ಬಂಧನ

ಖತರ್ನಾಕ್ ಕಳ್ಳನ ಬಂಧನ

ಚಿಕ್ಕೋಡಿ, ಜ. 24: ಖತರ್ನಾಕ್ ಕಳ್ಳನ ಬಂಧಿಸುವುದು ಪೋಲಿಸರಿಗೆ ತಲೆ ನೋವಾಗಿತ್ತು. ಆದರೆ ನಿನ್ನೆ ಕಳ್ಳನನ್ನು ಬಂಧಿಸುವಲ್ಲಿ  ನಿಪ್ಪಾಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ

ಬೆಳಗಾವಿ ಎಸ್.ಪಿ,ಹೆಚ್ಚುವರಿ ಎಸ್.ಪಿ.ಇವರ ಮಾರ್ಗದರ್ಶನದಲ್ಲಿ ಮನೋಜ ಕುಮಾರ ನಾಯಕ್ ಡಿ.ಎಸ್. ಪಿ.ಚಿಕ್ಕೋಡಿಯ ಅವರ ನೇತೃತ್ವದ ತಂಡದಲ್ಲಿ ಎಸ್.ಡಿ.ಸತ್ಯನಾಯಿಕ ಸಿ.ಪಿ.ಐ ನಿಪ್ಪಾಣಿ ವ್ರತ್ತ, ಪಿ.ಎಸ್.ಐ.ಗಳಾದ ಕುಮಾರ. ಹಾಡಕರ, ಬಿ.ಜಿ.ಸುಬ್ಬಾಪುರಮಠ, ಬಿ.ಎಸ್.ತಳವಾರ, ಹಾಗೂ ಇನ್ನೂಳಿದ ಪೋಲಿಸ ಇಲಾಖೆಯ ಸಿಬ್ಬಂದಿ ವರ್ಗದದವರಿಂದ ಬಾರಿ ಮೊತ್ತದ ಟ್ರಕ್ ಗಳನ್ನು ಕಳವು ಮಾಡಿದ ಆರೋಪಿ ಯಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಇಂದಿರಾ ನಗರ ನಿವಾಸಿ ಕಲ್ಲಪ್ಪ ಸುನೀಲ ಕದಮ ಎಂಬಾತ (24) ಬಂಧಿತ ಆರೋಪಿ.

ಇವನ ಬಗ್ಗೆ ಮಾಹಿತಿ ತೆಗೆದು ಪತ್ತೆ ಮಾಡಿ ದಿನಾಂಕ:23/01/ 2020,ರಂದು ದಸ್ತಗಿರಿ ಮಾಡಿದ್ದು, ಅವನು ತಾಬಾದಲ್ಲಿದ್ದ ನಿಪ್ಪಾಣಿ ಶಹರ ಪೋಲಿಸ ಠಾಣೆಯ ಅಪರಾಧ ಸಂಖ್ಯೆ 19/2019,ಕಲಂ 379 ಐ.ಪಿ.ಸಿ.ಪ್ರಕರಣದಲ್ಲಿ ಕಳುವಾಗಿದ್ದ ಅಶೋಕ ಲೇಲ್ಯಾಂಡ್ ಟ್ರಕ್ ನಂ:KA.23.A.8618 ಲಾರಿ ಸೇರಿ ಒಟ್ಟು 1,78,40,000 ಮೌಲ್ಯದ 13 ವಾಹನಗಳನ್ನು ಹಾಗೂ ವೆಲ್ಡಿಂಗ್ ಮತ್ತು ಪೇಂಟಿಂಗ್ ಮಶೀನ ಪೋಲಿಸರು ವಶಪಡಿಸಿಕೊಂಡು ಆತನನ್ನು ಬೆಳಗಾವಿ ಜಿಲ್ಲೆಯ ಹಿಂಡಲಗಾ ಕಾರ್ಯಾಗ್ರಹಕ್ಕೆ ರವಾನಿಸಲಾಗಿದೆ. ಈ ಕುರಿತು ನಿಪ್ಪಾಣಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos