ಬಿಡದಿ ನಿತ್ಯಾನಂದನ ಹೊಸ ಅರ್ಜಿ ತಿರಸ್ಕರಿಸಿದ ವಿದೇಶಾಂಗ ಇಲಾಖೆ!

ಬಿಡದಿ ನಿತ್ಯಾನಂದನ ಹೊಸ ಅರ್ಜಿ ತಿರಸ್ಕರಿಸಿದ ವಿದೇಶಾಂಗ ಇಲಾಖೆ!

ನವದೆಹಲಿ, ಡಿ. 07: ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಪಾಸ್​ಪೋರ್ಟ ಅನ್ನು ಭಾರತ ಸರ್ಕಾರ ರದ್ದುಗೊಳಿಸಿದೆ. ಬಿಡದಿಯಿಂದ ವಿದೇಶಕ್ಕೆ ಪರಾರಿಯಾಗಿ, ಈಕ್ವೆಡಾರ್​ನಲ್ಲಿ ಕೈಲಾಸ ಎಂಬ ಹೆಸರಿನ ರಾಷ್ಟ್ರ ಕಟ್ಟಲು ನಿತ್ಯಾನಂದ ಮುಂದಾಗಿದ್ದಾನೆ ಎನ್ನಲಾಗಿತ್ತು. ಪಾಸ್​ಪೋರ್ಟ್​ ಇಲ್ಲದೆ ನಿತ್ಯಾನಂದ ಹೇಗೆ ವಿದಾಶಕ್ಕೆ ಹಾರಿದ ಎಂಬ ಪ್ರಶ್ನೆಯೂ ಎದ್ದಿತ್ತು. ಸದ್ಯ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್​ ಕುಮಾರ್,​ ನಿತ್ಯಾನಂದನ ಪಾಸ್​ಪೋರ್ಟ್​ ರದ್ದುಗೊಳಿಸಿರುವ ವಿಚಾರವನ್ನು ತಿಳಿಸಿದ್ದು, ಆತ ಹೊಸ ಪಾಸ್​ಪೋರ್ಟ್​ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಕೂಡಾ ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ. ವಿದೇಶದಲ್ಲಿ ಹೊಸ ರಾಷ್ಟ್ರ ಕಟ್ಟಲು ನಿತ್ಯಾನಂದ ಮುಂದಾಗಿದ್ದಾನೆ ಎಂಬ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ರವೀಶ್​, ಒಂದು ವೆಬ್​ಸೈಟ್​ ನಿರ್ಮಿಸುವುದಕ್ಕಿಂತ ರಾಷ್ಟವನ್ನು ಕಟ್ಟುವುದು ವಿಭಿನ್ನವಾಗಿದೆ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos