ಕೇಂದ್ರ ಹಾಗೂ ರಾಜ್ಯದಲ್ಲಿ ಹಗಲು ದರೋಡೆ

ಕೇಂದ್ರ ಹಾಗೂ ರಾಜ್ಯದಲ್ಲಿ ಹಗಲು ದರೋಡೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2020ರಲ್ಲಿ ದೇಶದ ಜನರಿಗೆ ನೀಡಿದ ಕೊಡುಗೆಗಳನ್ನು ಮೋದಿ ರವರೆಗೆ ಪ್ಯಾಕ್ ಮಾಡಿ ಪೆಟ್ರೋಲ್, ಡೀಸೆಲ್, ಗ್ಯಾಸ್, ಆಹಾರ ಪದಾರ್ಥಗಳು, ಕೊರೋನಾ ರೈತ ವಿರೋಧಿ ಮಸೂದೆ ವಿಷಯಗಳ ಸಂಗ್ರಹ ಹೊಸ ವರ್ಷಕ್ಕೆ ಪ್ರಧಾನಿ ಮೋದಿರವರಿಗೆ ರವಾನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಇಂದು ನಡೆಸಲಾಯಿತು.

ನರೇಂದ್ರ ಮೋದಿರವರ ಆಡಳಿತದಲ್ಲಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಹೋಗಿದ್ದು ಜಿಡಿಪಿ ದರ ಕುಸಿತ ಉದ್ಯೋಗ ನಷ್ಟ ರೈತರಿಗೆ ಪರಿಹಾರ ವಿಲ್ಲದೆ ನಿರ್ಲಕ್ಷ್ಯತನ ಕೊರೋನ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಹಗಲು ದರೋಡೆ ಅನವಶ್ಯಕವಾದ ಮಸೂದೆಗಳನ್ನು ಜಾರಿ ಮಾಡುವುದರ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆದು ಸಿ.ಎ.ಎ.ಎನ್.ಆರ್.ಸಿ ಗೋ ಹತ್ಯೆ ಪ್ರಕರಣ ಮುಂದಿಟ್ಟು ಅಭಿವೃದ್ಧಿ ಬಿಜೆಪಿ ಸರ್ಕಾರ ಮರೆಮಾಚುತ್ತಿದೆ.

ಪ್ರತಿವರ್ಷವೂ ಒಂದೊಂದು  ಭರವಸೆ ನೀಡಿ ರಾಜ್ಯದ ದೇಶದ ಜನರನ್ನು ವಂಚಿಸುತ್ತಿರುವ ಬಿಜೆಪಿ ಕಪ್ಪು ಹಣ ತರಲಿಲ್ಲ ಬಡವರ ಖಾತೆಗೆ ಹಣ ಹಾಕಲಿಲ್ಲ ಡೀಸೆಲ್ ಪೆಟ್ರೋಲ್ ದರವನ್ನು ಇಳಿಸಲಿಲ್ಲ ಗ್ಯಾಸ್ ದರವನ್ನು ಏಕಾಏಕಿ ಏರಿಸುವ ಮೂಲಕ ಬಡವರ ಜೀವನಕ್ಕೆ ಅಪಾಯವನ್ನು ತಂದಿದೆ.

ರೂಪಾಂತರ ಕೊರೋನ ದೇಶಕ್ಕೆ ಕಾಲಿಟ್ಟರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇದರ ಬಗ್ಗೆ ಮುಂಜಾಗ್ರತೆ ಕ್ರಮಕೈಗೊಳ್ಳದೆ ವಿದೇಶದಿಂದ ಬರುವ ವಿಮಾನವನ್ನು ಸಹ ಸ್ಥಗಿತಗೊಳಿಸದೆ. ರೋಗ ದೇಶವ್ಯಾಪ್ತಿ ಹರಡಿದ ನಂತರ ಕ್ರಮಕೈಗೊಳ್ಳುವುದಾಗಿ ಹೇಳುತ್ತಾರೆ. ಈ ಸರ್ಕಾರ ತೊಲಗಬೇಕು ದೇಶದ ಜನರಿಗೆ ನೆಮ್ಮದಿ ತರಬೇಕೆಂದು ವಿನೂತನ ಪ್ರತಿಭಟನೆಯನ್ನು ಮಹಾತ್ಮಗಾಂಧಿ ಪ್ರತಿಮೆ ಬಳಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥರಾದ ಎಸ್ ಮನೋಹರ್, ಜಿ ಜನಾರ್ದನ್, ಎ ಆನಂದ್, ಈ ಶೇಖರ್ ಪ್ರಕಾಶ್, ಮಹೇಶ್ ಪುಟ್ಟರಾಜು, ಶಶಿಭೂಸಣ್ ಕೋದಂಡರಾಮ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು

ಫ್ರೆಶ್ ನ್ಯೂಸ್

Latest Posts

Featured Videos