ಬೆಳಗಾವಿ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಮಹಾರಾಷ್ಟ್ರ ಸಾರಿಗೆ ಬಸ್ ಅನ್ನು ತಡೆದ ಚುನಾವಣಾ ಸಿಬ್ಬಂದಿಗಳು ಪ್ರಯಾಣಿಕರ ತಪಾಸಣೆ ನಡೆಸಿದ ಸಂದರ್ಭದಲ್ಲಿ ಯಾವುದೇ ದಾಖಲೆ ಇಲ್ಲದ 12.94 ಲಕ್ಷ ರೂ. ಪತ್ತೆಯಾಗಿದೆ.
ಇಂದು ನಿಪ್ಪಾಣಿ ಪಟ್ಟಣದ ಹೊರ ವಲಯದ ಮುರಗುಡ ರಾಜ್ಯ ಹೆದ್ದಾರಿ ಬಳಿಯ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸುವ ವೇಳೆ ಕೊಲ್ಹಾಪುರ ಜಿಲ್ಲೆಯ ರಾಧಾನಗರ ಪಟ್ಟಣದ ನಿವಾಸಿ ವಿಜಯ ಸಾಧೇ ಅವರ ಬಳಿ ಈ ಹಣ ಪತ್ತೆಯಾಗಿದೆ.
ರಾಧಾನಗರದಿಂದ ಕೊಲ್ಹಾಪುರಕ್ಕೆ ಹೋಗುತ್ತಿದ್ದ ಮಹಾರಾಷ್ಟ್ರ ಸಾರಿಗೆ ಬಸ್ನಲ್ಲಿ ಬೆಳಗಾವಿಗೆ ತೆರಳುವ ಟಿಕೆಟ್ ಪಡೆದು ಇವರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು , ಹಣವನ್ನು ಜಪ್ತಿ ಮಾಡಿ ವಿಜಯ ಸಾಧೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಾಗಿದೆ. ನಿಪ್ಪಾಣಿ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.