ಹಾಸನ, ಮಾ. 17: ವಿಶ್ವದಲ್ಲಿ ಹಲವುದಿನಗಳಿಂದ ಕೊರೊನಾ ರೋಗವು ಜನರಲ್ಲಿ ಎಲ್ಲಿಲ್ಲದ ಆತಂಕವನ್ನು ಮೂಡಿಸುತ್ತಿದೆ. ಇಲ್ಲಿಯವರೆಗೆ ಕೊರೊನಾ ವೈರಸ್ ನಿಂದ ವಿಶ್ವದಲ್ಲಿ ಹಲವಾರು ಜನ ಸಾವನ್ನಪ್ಪಿದ್ದಾರೆ. ಈ ಕೊರೊನಾ ಭೀತಿ ನಮ್ಮ ರಾಜ್ಯದಲ್ಲಿ ಮಾರ್ಚ್ 21ರವರೆಗೆ ಮಾಲ್ ಮತ್ತು ಪಾರ್ಕ್ ಗಳಂತಹ ಸ್ಥಳಗಳನ್ನು ಬಂದ ಮಾಡಲಾಗಿದೆ, ಅದರಂತೆ ಹಾಸನದಲ್ಲಿರುವ ಪ್ರವಾಸಿ ಸ್ಥಳಗಳನ್ನು ಬಂದ ಮಾಡಲಾಗಿದೆ.
ಜಿಲ್ಲೆಯಲ್ಲಿ ಐತಿಹಾಸಿಕ ಸ್ಥಳಗಳೆನ್ನಿಸಿಕೊಂಡ ಬೇಲೂರು, ಹಳೇಬೀಡು, ಶ್ರವಣಬೆಳಗೊಳಕ್ಕೆ ಸದ್ಯ ಪ್ರವಾಸಿಗರ ಭೇಟಿಗೆ ಬ್ರೇಕ್ ಬಿದ್ದಿದೆ. ಪ್ರವಾಸೋದ್ಯಮ ನಿಷೇಧಿಸಿ ಡಿಸಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ.
ಪ್ರವಾಸದ ವೇಳೆ ಕೊರೊನಾ ಸೋಂಕಿತರು ಬಂದರೆ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳ ಸಭೆ ಬಳಿಕ ಜಿಲ್ಲಾಧಿಕಾರಿಗಳ ಆದೇಶ ಹೊರಬಿದ್ದಿದ್ದು, ಕೊರೊನಾ ಶಮನವಾಗೋವರೆಗೂ ಪ್ರವಾಸ ಮುಂದೂಡಲು ಜನರಿಗೆ ಡಿಸಿ ಮನವಿ ಮಾಡಿದ್ದಾರೆ.