ರೈತ ಕುಟುಂಬಕ್ಕೆ ಶಾಸಕರಿಂದ ಸಾಂತ್ವನ

  • In State
  • January 5, 2021
  • 223 Views
ರೈತ ಕುಟುಂಬಕ್ಕೆ ಶಾಸಕರಿಂದ ಸಾಂತ್ವನ

ಚಾಮರಾಜನಗರ: ತಾಲ್ಲೂಕಿನ ಯಣಗುಂಬ ಗ್ರಾಮದಲ್ಲಿ ಜಮೀನಿನಲ್ಲಿ ಮಲಗಿದ್ದ ಸ್ವಾಮಿಗೌಡ ಎಂಬ ರೈತನ ಮೇಲೆ ಕಾಡಾನೆದಾಳಿ ನಡೆಸಿ ಸಾವಿಗೀಡಾದ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಭೇಟಿನೀಡಿ ರೈತಕುಟುಂಬಕ್ಕೆ ಪರಿಹಾರ ವಿತರಿಸಿ, ಸಾಂತ್ವನ ಹೇಳಿದರು.
ಇದೇವೇಳೆ ಅವರು ಮಾತನಾಡಿ, ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಅರಣ್ಯಇಲಾಖೆ 7.50 ಲಕ್ಷ ರೂ.ಪರಿಹಾರ ನಿಗಧಿ ಮಾಡಿದೆ, ಆನೆದಾಳಿಯಿಂದ ಸಾವಿಗೀಡಾದ ಯಣಗುಂಬ ಗ್ರಾಮದ ರೈತಸ್ವಾಮಿಗೌಡ ಕುಟುಂಬಕ್ಕೆ ಅರಣ್ಯಇಲಾಖೆಯಿಂದ ಈಗಾಗಲೇ ಪ್ರಾರಂಭಿಕ ಮೊತ್ತ 2 ಲಕ್ಷ ರೂ. ಚೆಕ್ ವಿತರಣೆ ಮಾಡಲಾಗಿದೆ, ಉಳಿದ ಪರಿಹಾರದ ಮೊತ್ತವನ್ನು ಬೇಗನೆ ವಿತರಣೆ ಮಾಡಬೇಕು ಎಂದು ಅರಣ್ಯ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಇಲಾಖೆ ನೀಡಿರುವ ಪರಿಹಾರದ ಹಣವನ್ನು ಕುಟುಂಬದವರು ಸದ್ಭಳಕೆ ಮಾಡಿಕೊಳ್ಳಬೇಕು, ಕಾಡಂಚಿನ ಗ್ರಾಮಗಳ ಜನರು ಜಮೀನಿಗೆ ಹೋಗುವಾಗ ಮತ್ತು ವಾಪಸ್ ಬರುವಾಗ ಎಚ್ಚರಿಕೆ ವಹಿಸಬೇಕು, ಸಂಜೆವೇಳೆ ಬರುವಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಆರ್‌ಎಫ್‌ಒ ಸಭ್ಯಶ್ರೀ, ಡಿಆರ್‌ಎಫ್‌ಒ ಚಂದ್ರಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಹನುಮಂತಉಪ್ಪಾರ್, ಎ.ಎಸ್.ಗುರುಸ್ವಾಮಿ, ಜಿಪಂ ಮಾಜಿ ಸದಸ್ಯ ಸೋಮನಾಯಕ, ವಡ್ಗಲ್‌ಪುರ ಶೇಖರಪ್ಪ, ಮಲ್ಲಿಕ್, ನಾಗನಾಯಕ, ಪ್ರಭು, ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos