ಜಿಲ್ಲಾಭಿವೃದ್ಧಿಗೆ ಸಂಘ-ಸಂಸ್ಥೆಗಳ ಸಹಕಾರ ಮುಖ್ಯ

ಜಿಲ್ಲಾಭಿವೃದ್ಧಿಗೆ ಸಂಘ-ಸಂಸ್ಥೆಗಳ ಸಹಕಾರ ಮುಖ್ಯ

ಚಾಮರಾಜನಗರ: ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಸಹಕಾರ ಮುಖ್ಯವಾಗಿದೆ. ರೋಟರಿ ಸಂಸ್ಥೆಯು ಎರಡು ಬಸ್ ತಂಗುತಾಣ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಅತ್ಯವಶ್ಯಕವಾಗಿರುವ ಜೆಎಸ್‌ಎಸ್ ಮಹಿಳಾ ಕಾಲೇಜು ಬಳಿ ಪಟೇಲ್ ಬಜಾಜ್ ಸಹಕಾರದಲ್ಲಿ ನಿರ್ಮಾಣ ಮಾಡಿರುವುದು ಸಂತಸ ತಂದಿದೆ ಎಂದುಪರಿಸರ ಇಂಜಿನಿಯರ್ ಗಿರಿಜಾ ತಿಳಿಸಿದರು.
ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಜೆಎಸ್‌ಎಸ್ ಮಹಿಳಾ ಕಾಲೇಜ ಹತ್ತಿರ ಪಟೇಲ್ ಬಜಾಜ್ ಸಹಯೋಗದಲ್ಲಿ ನಿರ್ಮಾಣ ಮಾಡಿದ್ದ ಬಸ್ ತಂಗುತಾಣವನ್ನು ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದರ ಅವರು, ನಗರದ ಸ್ವಚ್ಛತೆಯಲ್ಲಿ ಎಲ್ಲರು ಭಾಗಿಗಳಾಗಬೇಕು. ಪರಿಸರ ವನ್ನು ಕಾಪಾಡುವ ನಿಟ್ಟಿನಲ್ಲಿ ನಗರಸಭೆ ಕಾರ್ಯಕ್ರಮಗಳಿಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.
ರೋಟರಿ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಉತ್ತಮ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕರು ಸಮುದಾಯದ ಆಸ್ತಿ. ತಾವು ಕಲಿತ ವಿದ್ಯೆಯನ್ನು ಮಕ್ಕಳಿಗೆ ಧಾರೆಯುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿದ್ದಾರೆ. ಇಂಥ ಶಿಕ್ಷಕರು ನಿವೃತ್ತರಾಗಿರುವುದು ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಿರುವುದು ಹೆಮ್ಮ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಚಂದ್ರಪ್ರಭ ಜೈನ್, ನಿಕಟಪೂರ್ವ ಅಧ್ಯಕ್ಷ ಆರ್.ಎಂ.ಸ್ವಾಮಿ, ಕಾರ್ಯದರ್ಶಿ ಕೆಂಪನಪುರ ಮಹದೇವಸ್ವಾಮಿ, ಪಟೇಲ್ ಬಜಾಜ್ ಮಾಲೀಕ ಪಿ. ವೃಷಬೇಂದ್ರಪ್ಪ, ರೋಟರಿಯನ್‌ಗಳಾದ ಶ್ರೀನಿವಾಸಶೆಟ್ಟಿ, ಜಿ.ಆರ್. ಆಶ್ವಥ್‌ನಾರಾಯಣ್, ಡಾ. ಆರ್.ಎಸ್. ನಾಗರಾರ್ಜುನ್, ಸುಭಾಷ್, ಮಹದೇವಸ್ವಾಮಿ, ಸುರೇಶ್, ಕಮಾಲ್‌ರಾಜ್, ಕಾಗಲವಾಡಿ ಚಂದ್ರು, ಸ್ವಾಗತ್ ರಮೇಶ್, ಎಲ್. ನಾಗರಾಜು, ಗುರುಸ್ವಾಮಿ, ಬಿ.ಕೆ. ಮೋಹನ್, ಸಿ.ಪಿ. ಮಹೇಶ್, ಸುರೇಶ್‌ಕುಮಾರ್ ಇತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos