ಸಮಾಪ್ತಿ ಕಾರ್ಯಕ್ರಮ

ಸಮಾಪ್ತಿ ಕಾರ್ಯಕ್ರಮ

ಕಮಲನಗರ: ತಾಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಇತ್ತೀಚ್ಚೆಗೆ ನಡೆದ ಶ್ರವಾಣ ಮಾಸದ ನಿಮಿತ್ತ ಹಮ್ಮಿಕೊಂಡ ಜಗನ್ನಾಥ ಅಕ್ಕಮಹಾದೇವಿ ಅವರ ಜೀವನ ಕುರಿತು ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಸ್ತ್ರೀ ಕುಲದ ಸಮಾನತೆ ಮತ್ತು ಸ್ವಾತಂತ್ರಕ್ಕಾಗಿ ಶರಣೆ ಅಕ್ಕಮಹಾದೇವಿ ಸೇರಿದಂತೆ ಸಾವಿರಾರು ಶರಣೆಯರು ನಡೆಸಿದ ಹೋರಾಟ ಮನುಕುಲದ ಇತಿಹಾಸದಲ್ಲಿ ಅವಿಸ್ಮರಣೀಯ ಎಂದು ವಿಜಯಲಕ್ಷ್ಮಿಕೌಟಗೆ ಹೇಳಿದರು.

ಶರಣ ಧನರಾಜ ಬಾವಗೆ ರವರು ಮಾತನಾಡಿ, ಇಂದಿನ ಯುಗದಲ್ಲಿ ಒತ್ತಡದ ಬದುಕುವಲ್ಲಿ ಸ್ವಲ್ಪ ಸಮಯವನ್ನು ವಚನ ಮತ್ತು ಪ್ರವಚನಗಳಲ್ಲಿ ಪಾಲ್ಗೂಂಡು ಯುವಕರು, ಯುವತಿಯರು, ಗ್ರಾಮಸ್ಥರು, ನೆಮ್ಮೆದಿಯಿಂದ ಬದಕಲು ಮುಂದಾಗಬೇಕು ಎಂದರು.

ವಚನ ಸ್ವರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಸಂಗಮೇಶ, ಸಾಯಿನಾಥ, ಶ್ರೇಯಾ, ಅವರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos