ಬಸ್ ಸಂಚಾರ- ಅಧಿಕಾರಿಗಳಿಗೆ ಸನ್ಮಾನ

 ಬಸ್ ಸಂಚಾರ- ಅಧಿಕಾರಿಗಳಿಗೆ ಸನ್ಮಾನ

ಹುಬ್ಬಳ್ಳಿ, ಜ. 04: ಕುಂದಗೋಳ – ನವಲಗುಂದ ದ ನಡುವೆ ಗುಡೇನಕಟ್ಟಿ ಗ್ರಾಮದ ಮಾರ್ಗವಾಗಿ  ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಕಲ್ಪಿಸಿದಕ್ಕೆ ಸಾರಿಗೆ ಅಧಿಕಾರಿಗಳಿಗೆ ಗುಡೇನಕಟ್ಟಿ ಗ್ರಾಮಸ್ಥರು ಸನ್ಮಾನ ಮಾಡಿದರು.

ಗುಡೇನಕಟ್ಟಿ ಗ್ರಾಮಸ್ಥರು ಹಲವಾರು ವರ್ಷಗಳ ಕಾಲ ಹೋರಾಟ ಮಾಡಿದ ಫಲವಾಗಿ ಬಸ್ ಸಂಚಾರ ಆರಂಭಗೊಂಡಿದ್ದು, ಇದಕ್ಕೆ ಸಾರಿಗೆ ಅಧಿಕಾರಿಗಳಾದ ರಾಮನಗೌಡ ಹಾಗೂ ಅಶೋಕ ಪಾಟೀಲ ಅವರ ಸಹಕಾರಿಂದ ಬಸ್ ಆರಂಭಕ್ಕೆ ಸಂತಸ  ವ್ಯಕ್ತಪಡಿಸುತ್ತಾರೆ.

ಗ್ರಾಮದ ಮುಖಂಡ ಬಸವರಾಜ ಯೋಗಪ್ಪನವರ ನೇತೃತ್ವದಲ್ಲಿ ಈ ಹಿಂದೆ ಸಾರಿಗೆ ಸಚಿವರಾಗಿದ್ದ ತಮ್ಮಣ್ಣ, ಹಾಲಿ ಸಚಿವರಾದ  ಲಕ್ಷ್ಮಣ ಸವದಿ, ವಾಕರಸಾಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಸಾರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡುವ ಮೂಲಕ ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಬಂಡಿವಾಡ, ಮಂಟೂರ, ನಾಗರಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.

ಬಸವರಾಜ ಯೋಗಪ್ಪನವರ, ಗಿರೀಶ ಬೆಳ್ಳಟ್ಟಿ, ಮಾರುತಿ ನೀರಲಗಿ, ಮಂಜುನಾಥ ಹಂಚಿನಮನಿ, ನಾಗಪ್ಪ ಸಿದ್ದೂನವರ, ಮುಕ್ತುಮಸಾಬ ರಾಟಿಮನಿ, ಕಾರ್ತಿಕ ಯೋಗಪ್ಪನವರ, ನಧಾಪ ಹಾಗೂ  ಮುಂತಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos