ಜೈ ಶ್ರೀರಾಮ್ ಹೇಳದ ಬಾಲಕಿನಿಗೆ ಬೆಂಕಿ: ಸುಳ್ಳುಸುದ್ದಿ ಎಂದು ಸ್ಪಷ್ಟಪಡಿಸಿದ ಪೋಲಿಸರು

ಜೈ ಶ್ರೀರಾಮ್ ಹೇಳದ ಬಾಲಕಿನಿಗೆ ಬೆಂಕಿ: ಸುಳ್ಳುಸುದ್ದಿ ಎಂದು ಸ್ಪಷ್ಟಪಡಿಸಿದ ಪೋಲಿಸರು

ಲಕ್ನೋ, ಜು.29: ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಜೈ ಶ್ರೀರಾಮ್ ಹೇಳದ ಬಾಲಕನೊಬ್ಬನಿಗೆ ಬೆಂಕಿ ಹಚ್ಚಲಾಗಿದೆ ಎಂದು ಬಾಲಕನೊಬ್ಬ ನೀಡಿದ ಮಾಹಿತಿ ಈಗ ಎಲ್ಲಡೆ ಸುದ್ದಿಯಾಗಿದೆ.
ಜೈಶ್ರೀರಾಮ್ ಅಂತ ಹೇಳಲು ನಾಲ್ವರು ನನಗೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ನಾಲ್ವರು ನನಗೆ ಬೆಂಕಿ ಹಚ್ಚಿದ್ದಾರೆ ಅಂತ ಪೊಲೀಸರಿಗೆ ಬಾಲಕನೊಬ್ಬ ತಿಳಿಸಿದ್ದಾನೆ. ಮತ್ತೊಮ್ಮೆ ನಾಲ್ಕು ಮಂದಿ ನನ್ನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾನೆ.
ಶೇ. 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಾಲಕನ ದೇಹ ಸುಟ್ಟು ಹೋಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬಾಲಕನು ಪೊಲೀಸರಿಗೆ ನೀಡಿರುವ ಮಾಹಿತಿಯಲ್ಲಿ ಸ್ಪಷ್ಟತೆಯಿಲ್ಲ. ಜೈ ಶ್ರೀರಾಮ್ ಘೋಷಣೆ ಹೇಳದ್ದಕ್ಕೆ ಬೆಂಕಿ ಹಚ್ಚಲಾಗಿದೆ ಎಂಬುದು ಸುಳ್ಳು ಸುದ್ದಿ ಅಂತ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos