ರಾಜ್ಯ ಮಟ್ಟದ ಬಾಡಿ ಬಿಲ್ಡರ್ಸ್  ಸ್ಪರ್ಧೆ

ರಾಜ್ಯ ಮಟ್ಟದ ಬಾಡಿ ಬಿಲ್ಡರ್ಸ್  ಸ್ಪರ್ಧೆ

ಧಾರವಾಡ, ಫೆ. 01: ಶುಕ್ರವಾರ ನಗರದ ಕಡಪಾ ಮೈದಾನದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಹಿದಾಯತ್ ರಾಯಚೂರು ಅಭಿಮಾನಿಗಳ ಬಳಗದ ವತಿಯಿಂದ ರಾಜ್ಯಮಟ್ಟದ ದೇಹಧಾರ್ಡ್ಯ ಸ್ಪರ್ಧೆ ಮಿಸ್ಟರ್ ಶ್ರಮಜೀವಿ 2020 ಯನ್ನು ಆಯೋಜಿಸಲಾಗಿತ್ತು. ಈ ದೇಹಧಾರ್ಡ್ಯ ಸ್ಪರ್ಧೆಗೆ ಬೆಳಗಾವಿ, ದಾವಣಗೆರೆ, ಮಂಗಳೂರು, ದಕ್ಷಿಣ ಕನ್ನಡ ಬೆಂಗಳೂರು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಪಟುಗಳ ಆಗಮಿಸಿದ್ದರು. 55 ಕೆಜಿಯಿಂದ 80 ಕೆಜಿಯವರೆಗೆ ದೇಹಧಾರ್ಡ್ಯ ಪಟುಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರದರ್ಶನ ತೋರಿದರು. ವಿವಿಧ ಕೆಜಿ ವಿಭಾಗದಲ್ಲಿ ಅದ್ಭುತವಾದ ಪ್ರದರ್ಶನ ತೋರಿದ ಪಟುಗಳಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬಹುಮಾನ ವಿತರಣೆ ಮಾಡಿ, ಶುಭ ಕೋರಿದರು.

ಫ್ರೆಶ್ ನ್ಯೂಸ್

Latest Posts

Featured Videos