ರಾಮ ಮಂದಿರ ಶಿಲಾನ್ಯಾಸ ಸಂಭ್ರಮ

  • In State
  • August 5, 2020
  • 277 Views
ರಾಮ ಮಂದಿರ ಶಿಲಾನ್ಯಾಸ ಸಂಭ್ರಮ

ಬೆಂಗಳೂರು: ರಾಮನ ಆಶೀರ್ವಾದದಿಂದ ಪಾಪಗಳೆಲ್ಲಾ ನಾಶವಾಗಿ ಧರ್ಮಸಂಸ್ಥಾಪನೆಯಾಗಲಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಶಂಕರಪ್ಪ ಆಶಿಸಿದ

ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಗರದಲ್ಲಿರುವ ರಾಮಾಂಜನೇಯ ದೇವಾಲಯದ ಎದುರು ರಾಮನ ಭಾವಚಿತ್ರಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶಂಕರಪ್ಪ ಹಾಗೂ ಎಚ್‌ಎಸ್‌ಆರ್ ವಾರ್ಡಿನ ಮಹಾನಗರಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶಂಕರಪ್ಪ ಅವರು, ಅಯೋಧ್ಯೆ ರಾಮಮಂದಿರ ನಿರ್ಮಾಣ ಭೂಮಿ ಪೂಜೆಯು ಪ್ರಧಾನಿ ನರೇಂದ್ರ ಮೋದಿ ಅವರ ಕೃಪಕಟಾಕ್ಷದಿಂದ ನೆರವೇರಿದೆ ಬುಧವಾರ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶಿಲಾನ್ಯಾಸ ನೆರವೇರಿರುವುದರಿಂದ ಶತಕೋಟಿ ಭಾರತೀಯರ ಜನಕ್ಕೆ ಸಂತೋಷವಾಗಿದೆ. ಪ್ರಪಂಚದಾದ್ಯಂತ ಜ್ಯೋತಿ ಬೆಳಗಿಸುವುದರ ಮೂಲಕ ರಾಮಮಂದಿರಕ್ಕೆ ಶುಭ ಕೋರಿದ್ದಾರೆ. ಶ್ರೀರಾಮನ ಆಶೀರ್ವಾದಿಂದ ಕೊರೋನಾದಂತಹ ದುಷ್ಟಕೂಟ ಪಾಪಗಳೆಲ್ಲಾ ನಾಶವಾಗಿ ಧರ್ಮಸಂಸ್ಥಾಪನೆಯಾಗಲಿ ಎಂದು ಹರಿಸಿದರು.

ಎಚ್‌ಎಸ್‌ಆರ್ ವಾರ್ಡಿನ ಮಹಾನಗರಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ ಮಾತನಾಡಿ, ಅಯೋಧ್ಯೆಯಲ್ಲಿ ಇದ್ದದ್ದು ರಾಮಮಂದಿರ. ಮಸೀದಿಯಲ್ಲ. ಈ ನಾಡಿನ ಜನತೆಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀರಾಮನ ಆಶೀರ್ವಾದ ಸದಾ ಇರಲಿ. ದೇವರು ನಮ್ಮ ಜೊತೆ ಇದ್ದು, ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಎಚ್‌ಎಸ್‌ಆರ್ ವಾರ್ಡಿನ ಮಹಾನಗರಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ, ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮಣ, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ರಮೇಶ್, ಬಿಜೆಪಿ ಮುಖಂಡ ವರಾಹ ವೆಂಕಟೇಶ್ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos