ಶಹಾಪುರ : ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ತಾಲೂಕಿನ ಗೋಗಿ ಗ್ರಾಮದಲ್ಲಿ ಮುಖಂಡರಾದ ಮಾಣಿಕರೆಡ್ಡಿ ಮಲ್ಹಾರ ಗೋಗಿ, ಶಾಸಕರ ಅಬಿವೃದ್ಧಿ ಕಾರ್ಯವನ್ನು ಮೆಚ್ಚಿ ಜೆಡಿಎಸ್, ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಸೇರ್ಪಡೆಗೊಂಡಿದ್ದು ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡರು.
ಬಳಿಕ ಮಾತಾನಾಡಿದ ಅವರು ಮತಕ್ಷೇತ್ರದ ಅಭಿವೃದ್ದಿಗಾಗಿ ಸದಾ ಛಲ ಬಿಡದೆ ಶ್ರಮಿಸುತ್ತೇನೆ, ಅಭಿವೃದ್ಧಿಗೆ ಬದ್ಧ, ಪಕ್ಷದ ಮೇಲೆ ಜನತೆ ವಿಶ್ವಾಸವಿಟ್ಟಿದ್ದು ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜನತೆಯ ಸಹಕಾರ ಅಗತ್ಯ ಕೊರೋನಾ ದಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಪಕ್ಷದ ಭವಿಷ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದರು.