ಕೆ.ಆರ್.ಪುರ, ಸೆ. 18: ಕನ್ನಡ ರಿಯಲ್ ಸ್ಟಾರ್ ಉಪೇಂದ್ರ ಅವರ 51ನೇ ಹುಟ್ಟುಹಬ್ಬ ಮತ್ತು ಅಭಿನವ ಭಾರ್ಗವ, ಸಾಹಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ 68 ನೇಯ ಹುಟ್ಟು ಹಬ್ಬದ ಪ್ರಯುಕ್ತ ಕೆ.ಆರ್.ಪುರ ಸರ್ಕಾರಿ ಸಾರ್ವಜನಿಕ
ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಕೆ.ಆರ್.ಪುರದ ಗಾಡ್ ಫಾದರ್ ಉಪೇಂದ್ರ ಅಭಿಮಾನಿಗಳ ಸಂಘದ ಮುಖಂಡರಾದ ಕೃಷ್ಣಮೂರ್ತಿ, ಚಿಕ್ಕಣ ನೇತೃತ್ವದಲ್ಲಿ ಹಣ್ಣು ಹಂಪಲು ನೀಡುವುದಕ್ಕೂ ಮನ್ನ ಕಟ್ಟೆ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಅರ್ಥಗರ್ಭಿತವಾಗಿ ನೆಚ್ಚಿನ ನಟರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಸಂಘದ ಪದಾಧಿಕಾರಿ ಚಿಕ್ಕಣ್ಣ ಮಾತನಾಡಿ, ನೆಚ್ಚಿನ ನಟರ ಹುಟ್ಟುಹಬ್ಬಗಳಿಗೆ ದುಂಡು ವೆಚ್ಚ ಮಾಡದೆ ಸಮಾಜದಲ್ಲಿನ ಬಡವರಿಗೆ, ಅನಾಥರಿಗೆ, ವೃದ್ಧರಿಗೆ ಸಹಾಯವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುವುದು ಎಂದು ಹೇಳಿದರು.
ನಂತರ ಕ.ರ.ವೆ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಇತ್ತಿನ ದಿನಗಳಲ್ಲಿ ಹೆಚ್ಚಿನ ನಟ ನಟಿಯರು ಆಂಗ್ಲ ಮತ್ತು ಪರ ಭಾಷೆಯ ವ್ಯಾಮೋಹದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದಾರೆ, ಅದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪೂರ್ವ ತಾಲೂಕು ವೈಧ್ಯಾದಿಕಾರಿ ಡಾ.ಚಂದ್ರಶೇಖರ್, ವಿಷ್ಣುವರ್ಧನ್ ಹಾಗೂ ಉಪೇಂದ್ರ ಅಭಿಮಾನಿಗಳಾದ ಕ.ರ.ವೆ ಕೃಷ್ಣಮೂರ್ತಿ, ಓಂ ಮಹೇಶ್, ಮಧು, ಮಣಿ, ಸಂತೋಷ್, ಲಕ್ಷ್ಮಿ, ಕನ್ನಡ ಚಂದ್ರು, ಶಂಕರ್, ಗುರು ರೆಡ್ಡಿ, ವಿನಯ್ ರಾಜ್, ಗೌತಮ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.