ಆಮ್ ಆದ್ಮಿ ಪಕ್ಷದಿಂದ ವಾರ್ಡ್ ಅಧ್ಯಕ್ಷರ ನೇಮಕ

ಆಮ್ ಆದ್ಮಿ ಪಕ್ಷದಿಂದ ವಾರ್ಡ್ ಅಧ್ಯಕ್ಷರ ನೇಮಕ

ಬೆಂಗಳೂರು, ಜ.14: ಮುಂಬರುವ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವು ಚುನಾವಣಾ ತಯಾರಿಗಾಗಿ ವಾರ್ಡ್ ಅಧ್ಯಕ್ಷರನ್ನು ನೇಮಕ ಮಾಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಬಿಎಂಪಿ‌ ಕ್ಷೇತ್ರದ ಎಲ್ಲಾ ಕ್ಷೇತ್ರಗಳಲ್ಲಿ ಜನಸಂಪರ್ಕ ಪಾದಯಾತ್ರೆ, ವಾರ್ಡ್ ಸಭೆ, ಮನೆ ಮನೆ ಪ್ರಚಾರ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಇನ್ನಷ್ಟು ಚುರುಕುಗೊಳಿಸಿ, ಜನಸಾಮಾನ್ಯರ ಸಮಸ್ಯೆ ಆಲಿಸಲು, ಸ್ಥಳೀಯ ಕುಂದುಕೊರತೆಗಳ ಬಗ್ಗೆ ತಿಳಿಯಲು, ಜನಸಂಪರ್ಕ ಮತ್ತು ವಿಧಾನಸಭಾ ಕ್ಷೇತ್ರವಾರು ಯೋಜನೆಗಳನ್ನು ರೂಪಿಸಲು ಈ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಕ್ಷೇತ್ರ ಮಟ್ಟದ ಅಧ್ಯಕ್ಷರ ವಿವಿರಗಳು ಇಂತಿವೆ: ಶಾಂತಿ ನಗರ- ಅಬ್ದುಲ್ ಖಾದರ್, ಸಿವಿರಾಮನ್ ನಗರ- ಆನಂದ ವಾಸುದೇವನ್, ವಿಜಯನಗರ- ಚನ್ನಪ್ಪಗೌಡ, ಬಿಟಿಎಂ ಲೇಔಟ್- ಫಿರೋಜ್ ಖಾನ್, ರಾಜಾಜಿನಗರ – ಗೂರುಮೂರ್ತಿ, ಚಾಮರಾಜಪೇಟೆ- ಜಗದೀಶ್ ಚಂದ್ರ, ಸರ್ವಜ್ಞನಗರ- ಮೊಹಮ್ಮದ್ ಅಸದ್, ಮಲ್ಲೇಶದವರ- ಸಿದ್ದು, ಬೊಮ್ಮನಹಳ್ಳಿ- ವಿಜಯ್ ಕುಮಾರ್, ಶಿವಾಜಿನಗರ- ಅನೀಸ್, ಕೆ.ಆರ್ ಪುರಂ- ಸಿವರಾಮನ್, ಚಿಕ್ಕಪೇಟೆ- ಅಕ್ರಮ್ ಸೈಟ್, ದಾಸರಹಳ್ಳಿ- ವೆಂಕಟೇಗೌಡ, ಮಹಲಕ್ಷ್ಮೀ ಲೇಔಟ್- ಅಜಿತ್ ರಾಜೇಗೌಡ, ಗೋವಿಂದರಾಜನಗರ- ಪರಮೇಶ್ ಅವರನ್ನು ನೇಮಕ‌ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos